ಹೀನಾಯ ಸೋಲಿನತ್ತ ಬಿಜೆಪಿಯ ತಂಙಳ್
Update: 2016-05-19 06:22 GMT
ತಿರುವನಂತಪುರಮ್ , ಮೇ 19: ಕೇರಳದಲ್ಲಿ ಬಿಜೆಪಿಯ ಚುನಾವಣಾ ತಂತ್ರ ಭಾಗಶ: ಯಶಸ್ವಿಯಾಗಿದೆ. ಆದರೆ ಅದರ ಸ್ಟಾರ್ ಅಭ್ಯರ್ಥಿ ಹಾಗು ಅಚ್ಚರಿಯ ಅಭ್ಯರ್ಥಿ ಹಾಕುವ ತಂತ್ರ ಯಾವುದೇ ಫಲ ನೀಡಿಲ್ಲ. ತಿರುವನಂತಪುರಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಶಾಂತ್ ಹಿನ್ನಡೆ ಅನುಭವಿಸಿದ್ದಾರೆ. ಪ್ರಾರಂಭದಿಂದಲೇ ತೃತೀಯ ಸ್ಥಾನದಲ್ಲಿದ್ದಾರೆ. ಹಾಗಾಗಿ ಇನ್ನು ಅವರು ಗೆಲ್ಲುವ ಸಾಧ್ಯತೆ ಕಡಿಮೆ.
ಇನ್ನು ಮಲಪ್ಪುರಂ ನಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ ಬಾದಷಾ ತಂಙಳ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲಿ ಐಕ್ಯ ರಂಗದ ಉಬೇದುಲ್ಲ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಡರಂಗದ ಅಭ್ಯರ್ಥಿಗಿಂತ ೩೮ ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ. ಹಾಗಾಗಿ ಅಲ್ಲಿ ಬಿಜೆಪಿ ಹೀನಾಯವಾಗಿ ಸೋಲುವುದು ಖಚಿತ .