ಖಡ್ಸೆಗೆ ಭೂಗತ ಜಗತ್ತಿನ ಸಂಬಂಧವಿಲ್ಲ: ಮಹಾರಾಷ್ಟ್ರ ಎಟಿಎಸ್

Update: 2016-06-16 07:49 GMT

  ಮುಂಬೈ, ಜೂನ್ 16: ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಏಕನಾಥ್ ಖಡ್ಸೆಗೆ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ ಕ್ಲೀನ್ ಚಿಟ್ ನೀಡಿದೆ. ಭೂಗತ ಲೋಕದೊಂದಿಗೆ ಅವರಿಗೆ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಕಳೆದ ವರ್ಷದ ಫೋನ್ ದಾಖಲೆಗಳನ್ನು ಪರಿಶೀಲಿಸಿದ್ದು ಇವರ ನಂಬರಿಗೆ ಯಾವುದೇ ಕರೆಯು ಪಾಕಿಸ್ತಾನದಿಂದ ಬಂದಿದ್ದನ್ನು ಪತ್ತೆಹಚ್ಚಲು ತಮ್ಮಿಂದ ಸಾಧ್ಯವಾಗಿಲ್ಲ ಎಂದು ಎಟಿಎಸ್ ಮೂಲಗಳು ತಿಳಿಸಿವೆ.

ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹೀಂನ ಪತ್ನಿಯಿಂದ ಅನೇಕ ಬಾರಿ ಕರೆಗಳು ಖಡ್ಸೆಗೆ ಬಂದಿರುವುದಾಗಿ ಹಾಕರ್‌ಗಳು ಕಂಡುಹುಡುಕಿದ್ದರು. ಆನಂತರ ಖಡ್ಸೆ ವಿರುದ್ಧ ಪ್ರತಿಪಕ್ಷಗಳು ರಂಗಕ್ಕೆ ಬಂದಿದ್ದವು. ಭೂಗತಲೋಕದ ಸಂಬಂಧ ಹಾಗೂ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವ ಮಧ್ಯಪ್ರವೇಶಿಸಿ ಖಡ್ಸೆಯನ್ನು ರಾಜಿನಾಮೆ ಕೊಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News