ಕಿಡ್ನಿ ರೋಗಿಗಳ ಸಂಘದ ಸ್ಥಾಪಕಾಧ್ಯಕ್ಷ ಎಸ್. ಪ್ರಸಾದ್ ನಿಧನ
Update: 2016-10-24 06:58 GMT
ಮಂಗಳೂರು, ಅ.24: ಕಿಡ್ನಿ ರೋಗಿಗಳ ಸಂಘದ ಸ್ಥಾಪಕಾಧ್ಯಕ್ಷ, ಕುಳಾಯಿ ಹೊಸಬೆಟ್ಟು ನಿವಾಸಿ ಎಸ್. ಪ್ರಸಾದ್ ರವಿವಾರ ತಡರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಪ್ರಸಾದ್ ಅವರು ಕಿಡ್ನಿ ರೋಗಿಗಳ ಸಂಘದ ಸ್ಥಾಪನೆ, 'ಕಿಡ್ನಿ ರೋಗಿಗಳ ಕ್ಷೇಮಾಭಿವೃದ್ದಿ ಯೋಜನೆ', ಅಂಗಾಂಗ ದಾನ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಮತ್ತು ದೂರದೃಷ್ಠಿ ಚಿಂತನೆಗಳನ್ನು ಹೊಂದಿದ್ದರು
ಇವರ ನಿಧನಕ್ಕೆ ಕಿಡ್ನಿ ರೋಗಿಗಳ ಸಂಘದ ಗೌರವ ಸಂಚಾಲಕ ಉಮರ್ ಯು.ಎಚ್. ಸಹಿತ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.