ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಖಳನಟರಿಬ್ಬರು ನೀರುಪಾಲು,ಈಜಿ ಪಾರಾದ ದುನಿಯಾ ವಿಜಿ

Update: 2016-11-07 14:49 GMT

ಬೆಂಗಳೂರು,ನ.7: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಇಂದು ದುನಿಯಾ ವಿಜಿ ನಾಯಕನಾಗಿರುವ ‘ಮಾಸ್ತಿಗುಡಿ’ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಮತ್ತು ಉದಯ ನೀರುಪಾಲಾ ಗಿದ್ದಾರೆ. ಅವರ ಜೊತೆಯಲ್ಲೇ ನೀರಿಗೆ ಹಾರಿದ್ದ ದುನಿಯಾ ವಿಜಿ ಈಜಿ ಮೇಲಕ್ಕೆ ಬಂದಿದ್ದು, ತೆಪ್ಪದ ಮೂಲಕ ಅವರನ್ನು ರಕ್ಷಿಸಲಾಗಿದೆ.

ನಾಗಶೇಖರ ನಿರ್ದೇಶನದ ಈ ಚಿತ್ರದ ಕ್ಲೈಮಾಕ್ಸ್ ದೃಶ್ಯಕ್ಕಾಗಿ ಮಧ್ಯಾಹ್ನ 2:48ರ ಸುಮಾರಿಗೆ ಅನಿಲ್,ಉದಯ ಮತ್ತು ದುನಿಯಾ ವಿಜಿ ಹೆಲಿಕಾಪ್ಟರ್‌ನಿಂದ ಒಬ್ಬರ ಹಿಂದೊಬ್ಬರಂತೆ ಕೆರೆಗೆ ಹಾರಿದ್ದರು. ಆದರೆ ನೀರಿನಲ್ಲಿ ಮುಳುಗಿದ್ದ ಅನಿಲ ಮತ್ತು ಉದಯ ಮೇಲಕ್ಕೆ ಬಂದಿಲ್ಲ. ದುನಿಯಾ ವಿಜಿ ಮಾತ್ರ ಈಜಿಕೊಂಡು ನೀರಿನಿಂದ ಮೇಲಕ್ಕೆ ಬಂದು ಜೀವಸಹಿತ ಪಾರಾಗಿದ್ದಾರೆ.

ನೀರುಪಾಲಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಈಜುತಜ್ಞರನ್ನು ಕರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News