ಐಟಿ ದಾಳಿಗೊಳಗಾದ ಅಧಿಕಾರಿಗಳ ಬಗ್ಗೆ ಸಿಎಂ ಏನು ಹೇಳ್ತಾರೆ?

Update: 2016-12-03 04:08 GMT

ಬೆಂಗಳೂರು, ಡಿ.3: ಗುರುವಾರ ಐಟಿ ದಾಳಿಗೊಳಗಾದ ಅಧಿಕಾರಿಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಅಧಿಕಾರಿಗಳು ಅಧಿಕಾರಿಗಳೇ ಹೊರತು ಯಾರಿಗೂ ಆಪ್ತರಲ್ಲ. ರಾಜ್ಯದಲ್ಲಿರುವ ಆರೂವರೆ ಕೋಟಿ ಜನರೂ ನನಗೆ ಆಪ್ತರೇ. ಭ್ರಷ್ಟಾಚಾರ ಎಸಗಿದವರು ಶಿಕ್ಷೆ ಅನುಭವಿಸುತ್ತಾರೆ. ಭ್ರಷ್ಟತೆಯ ದಮನಕ್ಕೆ ಸರಕಾರದ ಸಂಪೂರ್ಣ ಸಹಕಾರ ಇದೆ ಎಂದರು.
ಕಾನೂನುಬಾಹಿರವಾಗಿ ಆಸ್ತಿ ಸಂಗ್ರಹಿಸಿಟ್ಟುಕೊಂಡರೇ ಐಟಿ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News