ನಿಖಿಲ್ ಭಾರತ್ ಸಾಹಿತ್ಯ ಸಮ್ಮೇಳನ ರಾಷ್ಟ್ರಪತಿಯಿಂದ ಚಾಲನೆ
Update: 2016-12-25 15:16 IST
ಬೆಂಗಳೂರು, ಡಿ.25: ನಗರದಲ್ಲಿ ನಡೆದ 89ನೇ ವಾರ್ಷಿಕ ನಿಖಿಲ್ ಭಾರತ್ ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ವಜುಬಾಯ್ ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಶುಭ್ರಕಮಲ್ ಮುಖರ್ಜಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ವಿಶೇಷ ವಿಮಾನದ ಮೂಲಕ ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟಪತಿ ಪ್ರಣಬ್ ಮುಖರ್ಜಿ ಅವರನ್ನು ರಾಜ್ಯಪಾಲ ವಜುಬಾಯ್ ವಾಲ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಯರ್ ಪದ್ಮಾವತಿ ಮತ್ತಿತರ ಗಣ್ಯರು ಸ್ವಾಗತಿಸಿದರು.