ಬೀದಿ ನಾಯಿಗಳ ಹೆಚ್ಚಳ...! ಸಾರ್ವಜನಿಕರಿಗೆ ಉಪಟಳ...!

Update: 2017-01-13 19:03 GMT

 ಮಾನ್ಯರೆ,
ಉಡುಪಿ ನಗರದ ಸುತ್ತ-ಮುತ್ತ ಬೀಡಿನಗುಡ್ಡೆ, ಅಲಂಕಾರ್ ಚಿತ್ರ ಮಂದಿರದ ಹತ್ತಿರ, ಚಿತ್ತರಂಜನ್ ವೃತ್ತ, ಮಿಷನ್ ಕಾಂಪೌಂಡ್, ಭುಜಂಗ ಪಾರ್ಕ್, ಆದಿ ಉಡುಪಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಇವುಗಳ ಉಪಟಳದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ಧಾರೆ.
ಬೀದಿ ನಾಯಿಗಳು ಮನ ಬಂದಂತೆ ರಸ್ತೆಯಲ್ಲಿ ಸಂಚರಿಸುವು ದರಿಂದ ವಾಹನ ಅಪಘಾತಗಳಿಗೆ ಕಾರಣವಾಗುತ್ತಿವೆ. ಭುಜಂಗ ಪಾರ್ಕಿನ ಮಕ್ಕಳ ಆಟದ ಮೈದಾನವನ್ನು ಕೂಡಾ ಬೀದಿ ನಾಯಿಗಳು ಆಶ್ರಯ ತಾಣವಾಗಿಸಿ ಕೊಂಡಿವೆ. ಇಲ್ಲಿ ಮಕ್ಕಳು ಆಟವಾಡಲು ಭಯಪಡುವಂತಾಗಿದೆ.
ಆದ್ದರಿಂದ ಸಂಬಂಧ ಪಟ್ಟವರು ಸಾರ್ವಜನಿಕರಿಗಾಗುವ ಸಮಸ್ಯೆಯನ್ನು ಗಮನಿಸಿ, ನಗರದ ಸುತ್ತಮುತ್ತಲಿನ ಬೀದಿ ನಾಯಿಗಳಿಗೆ ಸಂತಾನ-ಹರಣ ಚಿಕಿತ್ಸೆ ಮಾಡಿ ಅವುಗಳ ಸಂತತಿಯನ್ನು ನಿಯಂತ್ರಿಸಬೇಕಾಗಿದೆ.
 

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News