‘ಬಿಜೆಪಿಯವರೇ ಕಾಂಗ್ರೆಸ್‌ಗೆ ಸಿಡಿ ಕೊಟ್ಟಿದ್ದು’

Update: 2017-02-13 11:55 GMT

ಬೆಂಗಳೂರು,ಫೆ.13: ಕರ್ನಾಟಕದಲ್ಲಿ ಸಂಚಲನ ಮೂಡಿಸಿರುವ ಬಿಎಸ್ ಯಡಿಯೂರಪ್ಪ- ಅನಂತಕುಮಾರ್ ನಡುವಿನ ಸಿಡಿ ಸಂಭಾಷಣೆ ರಹಸ್ಯವನ್ನು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಬಿಚ್ಚಿಟ್ಟಿದ್ದಾರೆ.

‘‘ಬಿಜೆಪಿ ಪಕ್ಷದವರೇ ನಮಗೆ ಬಿಎಸ್‌ವೈ-ಅನಂತಕುಮಾರ್ ಸಂಭಾಷಣೆಯ ಸಿಡಿ ಕೊಟ್ಟಿದ್ದಾರೆ’’ ಎಂದು ಉಗ್ರಪ್ಪ ಹೇಳಿದ್ದಾರೆ.

  ಕಳೆದ ರಾತ್ರಿ ಬೆಂಗಳೂರಿನಲ್ಲಿ ಪ್ರಭಾವಿ ನಾಯಕರು ಈ ತಂತ್ರ ರೂಪಿಸಿದ್ದು, ಬಿಎಸ್‌ವೈಗೆ ಮೂಗುದಾರ ತೊಡಿಸಲು ಈ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸಮಾರಂಭವೊಂದರಲ್ಲಿ ಬಿಎಸ್‌ವೈ-ಅನಂತಕುಮಾರ್ ಅವರು ಹೈಕಮಾಂಡ್‌ಗೆ ಕಪ್ಪ ನೀಡಿರುವ ಬಗ್ಗೆ ಮಾತನಾಡಿರುವ ಸಿಡಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ಗೆ ಈ ಸಿಡಿ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆಗೆ ಉಗ್ರಪ್ಪ ಉತ್ತರ ನೀಡಿದ್ದಾರೆ. ಸಿಡಿ ಪ್ರಕರಣದ ಬಗ್ಗೆ ಬಿಎಸ್‌ವೈ ಹಾಗೂ ಅನಂತಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News