ಮದ್ಯ ನಿಷೇಧಕ್ಕಾಗಿ ಅಬಕಾರಿ ಕಚೇರಿ ಮುಂದೆ ಪ್ರತಿಭಟನೆ

Update: 2017-02-21 09:31 GMT

ಬೆಂಗಳೂರು, ಫೆ.21: ಮದ್ಯ ನಿಷೇಧ ಆಂದೋಲನವು ಕಳೆದ 20 ದಿನಗಳಿಂದ ಕರ್ನಾಟಕದ ಸುಮಾರು 18 ಜಿಲ್ಲೆಗಳಲ್ಲಿ ಮದ್ಯನಿಷೇಧಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲೇ ಇತ್ತು. ಇಂದು ಅದರ ಸಮಾಪ್ತಿ ಆಗಿ ಬೆಂಗಳೂರಿನ ಅಬಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಹಿರಿಯ ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿವಾದಿ ಸುರೇಂದ್ರ ಕೌಜಲಗಿ, ಡಾ. ಜಿ.ರಾಮಕೃಷ್ಣ, ಶಾಸಕ ಬಿ.ಆರ್.ಪಾಟೀಲ್, ಮಾಜಿ ಸ್ಪೀಕರ್ ಕೃಷ್ಣ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. 

'ಮದ್ಯ ನಿಷೇಧ ಮಾಡಿ ಇಲ್ಲವೇ ಗಾಂಧಿ ಫೋಟೋ ವಾಪಸ್ ಕೊಡಿ' ಎಂದು ಘೋಷಣೆಗಳು ಮೊಳಗಿದವು. ನೂರಾರು ಮಹಿಳೆಯರು ಅಬಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊನೆಗೆ ಪ್ರತಿಭಟನಾಕಾರರನ್ನು  ವಶಕ್ಕೆ ಪಡೆದು ಪೊಲೀಸರು ಪ್ರತಿಭಟನೆಯನ್ನು ತಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News