2015-16ನೆ ಸಾಲಿನ ಬಾಳೇಕುಂದ್ರಿ ಪ್ರಶಸ್ತಿ ಪ್ರಕಟ

Update: 2017-04-25 13:12 GMT

ಬೆಂಗಳೂರು, ಎ.25: ರಾಜ್ಯ ಸರಕಾರವು ಜಲಸಂಪನ್ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್‌ಗಳ ಪೈಕಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್‌ಗಳಿಗೆ 2015, 2016ನೆ ಸಾಲಿನ ಎಸ್.ಜಿ.ಬಾಳೇಕುಂದ್ರಿ ಪ್ರಶಸ್ತಿಯನ್ನು ಪ್ರಕಟಿಸಿದೆ.

2015: ಕಲಬುರ್ಗಿ ಐಪಿಸಿ ವೃತ್ತದ ಅಧೀಕ್ಷಕ ಅಭಿಯಂತರ ಜಗನ್ನಾಥ್ ಹಲಿಂಗೆಯನ್ನು 2015ನೆ ಸಾಲಿನ ಎಸ್.ಜಿ.ಬಾಳೇಕುಂದ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2016: ಬೆಂಗಳೂರಿನ ಜಲ ಸಂವರ್ಧನ ಸಂಸ್ಥೆಯ ಜಲ ವಿಜ್ಞಾನ ಘಟಕದ ಅಧೀಕ್ಷಕ ಅಭಿಯಂತರ ಮಾಧವ, ಹೊಸದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಎಲ್.ಪುಟ್ಟಸ್ವಾಮಿ, ಹಲಗಣಿಯ ಎಂಎಲ್‌ಐ ಉಪ ವಿಭಾಗದ ಕೃಷ್ಣ ಭಾಗ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಕೆ.ಶಂಕರ್.

ಬೆಂಗಳೂರಿನ ಜಲ ಸಂವರ್ಧನ ಸಂಸ್ಥೆಯ ಕಾವೇರಿ ಘಟಕದ ಸಹಾಯಕ ಇಂಜಿನಿಯರ್ ಪ್ರೇಮಲತಾ ಆರ್., ನಾರಾಯಣಪುರ ಕೃಷ್ಣ ಭಾಗ್ಯ ಜಲ ನಿಗಮದ ಅಣೆಕಟ್ಟು ಉಪ ವಿಭಾಗದ ಸಹಾಯಕ ಇಂಜಿನಿಯರ್ ಹಳ್ಳೂರು ಅವರಿಗೆ 2016ನೆ ಸಾಲಿನ ಎಸ್.ಜಿ.ಬಾಳೇಕುಂದ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News