ಅನೈತಿಕ ಸಂಬಂಧಕ್ಕಾಗಿ ಪತಿಯ ಕೊಲೆ: ಶವ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಪತ್ನಿ, ಪ್ರಿಯಕರ

Update: 2017-05-06 14:32 GMT

ಬೆಂಗಳೂರು, ಮೇ 6: ಅನೈತಿಕ ಸಂಬಂಧಕ್ಕಾಗಿ ಪತಿಯನ್ನು ಕೊಲೆಗೈದು, ಶವ ಸಾಗಿಸುತ್ತಿದ್ದ ವೇಳೆ ಪತ್ನಿ ಹಾಗೂ ಆಕೆಯ ಪ್ರಿಯಕರ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ.

ಪತ್ನಿ ಚಂದ್ರಬಾಯಿ(40) ಆಕೆಯ ಪ್ರಿಯಕರ ಅಶೋಕ್ ಎಂಬವರನ್ನು ಇಲ್ಲಿನ ಜೆಸಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ಪತಿ ಮಾನ್‌ಸಿಂಗ್(55)ನನ್ನು ಪತ್ನಿ ಚಂದ್ರಬಾಯಿ ಸೇರಿ ನಾಲ್ವರು ಮನೆಯಲ್ಲಿಯೇ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ಯಾರು ಇಲ್ಲದ ವೇಳೆ ಶವ ಸಾಗಿಸಲು ಮುಂದಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಚಂದ್ರಬಾಯಿ ಮತ್ತು ಅಶೋಕನ ನಡುವಿನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಕಾರಣದಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಜೆಸಿ ನಗರ ಠಾಣಾ ಪೊಲೀಸರು, ಮತ್ತಿಬ್ಬರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News