ಮಾಧ್ಯಮ ಕಾರ್ಯಾಗಾರಕ್ಕೆ ಈಶ್ವರಪ್ಪ ಗೈರು: ಬಾಹುಬಲಿ ಸಿನಿಮಾಗೆ ಹಾಜರು..!

Update: 2017-05-28 14:20 GMT

ಬೆಂಗಳೂರು, ಮೇ 28: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರಕ್ಕೆ ಗೈರು ಹಾಜರಾಗಿ, ಕುಟುಂಬದ ಸದಸ್ಯರೊಂದಿಗೆ ಬಾಹುಬಲಿ-2 ಚಿತ್ರ ವೀಕ್ಷಣೆ ಮಾಡಿದರು.

ಯಶವಂತಪುರ ಸಮೀಪದಲ್ಲಿನ ಒರಾಯನ್ ಮಾಲ್‌ಗೆ ಬೆಳಗ್ಗೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಈಶ್ವರಪ್ಪ, ಬಾಹುಬಲಿ-2 ಸಿನಿಮಾ ವೀಕ್ಷಿಸಿದರು. ಅಲ್ಲದೆ, ಬಾಹುಬಲಿ ಸಿನೆಮಾ ಬಹಳ ಚೆನ್ನಾಗಿದೆ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

ಆಹ್ವಾನಿಸಿಲ್ಲ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದ ಬಗ್ಗೆ ಆಯೋಜಕರ ತನ್ನನ್ನು ಆಹ್ವಾಸಿಲ್ಲ. ಹೀಗಾಗಿ ರವಿವಾರ ರಜೆ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬಾಹುಬಲಿ ಸಿನಿಮಾ ನೋಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.

ಮಧ್ಯಾಹ್ನ 3:30 ಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಗೆ ತೆರಳುತ್ತೇನೆ. ಬಾಹುಬಲಿ ಚಿತ್ರ ವೀಕ್ಷಣೆ ಸಂಬಂಧ ಯಾರಿಗೂ ಅನ್ಯತಾ ಭಾವನೆ ಬೇಡ. ಕುಟುಂಬದ ಸದಸ್ಯರಿಗೆ ಕೊಂಚ ಸಮಯ ನೀಡಬೇಕಲ್ಲವೇ ಎಂದು ಈಶ್ವರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News