ಮಾದಕವಸ್ತು ಮಾರಾಟ: 15 ಕೆ.ಜಿ. ವಶ
Update: 2017-07-04 17:42 IST
ಬೆಂಗಳೂರು, ಜು.4: ಒರಿಸ್ಸಾದಿಂದ ರೈಲು ಮೂಲಕ ಬೆಂಗಳೂರಿಗೆ ತರಲಾಗಿದ್ದ ಆರೋಪದ ಮೇಲೆ 15 ಕೆ.ಜಿ ಮಾದಕವಸ್ತುವನ್ನು ಇಲ್ಲಿನ ಶ್ರೀರಾಂಪುರ ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಕೆಪಿ ಅಗ್ರಹಾರ ನಿವಾಸಿ ನಾರಾಯಣ್ ಮತ್ತು ತಮಿಳುನಾಡು ಮೂಲದ ಆನಂದ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಒರಿಸ್ಸಾದಿಂದ ರೈಲು ಮೂಲಕ ತಮಿಳುನಾಡು ರೈಲ್ವೆ ನಿಲ್ದಾಣಕ್ಕೆ ಮಾದಕವಸ್ತು ತರಲಾಗಿತ್ತು. ಬಳಿಕ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಈ ವೇಳೆ ಖಚಿತ ಮಾಹಿತಿಯನ್ನು ಆಧರಿಸಿ ಶ್ರೀರಾಂಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, 15 ಕೆ.ಜಿ ಮಾದಕವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.