ದಕ್ಷಿಣ ಕನ್ನಡ ಕೋಮು ಸಂಘರ್ಷ ತಡೆಗೆ ಜೆಡಿಎಸ್ ಶಾಂತಿ ಯಾತ್ರೆ: ಎಚ್.ಡಿ.ದೇವೇಗೌಡ

Update: 2017-07-09 12:59 GMT

ಬೆಂಗಳೂರು, ಜು. 9: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೋಮು ಗಲಭೆ ತಡೆಗಟ್ಟಲು ಹಾಗೂ ಶಾಂತಿಯನ್ನು ಕಾಪಾಡಲು ಜೆಡಿಎಸ್ ಪಕ್ಷ ಸಾಹಿತಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಗೆ ಶಾಂತಿ ಯಾತ್ರೆ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

 ರವಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳೂ ಬಂಟ್ವಾಳ ತಾಲೂಕಿನ ಕೋಮುಗಲಭೆಯನ್ನು ತಡೆಗಟ್ಟಲು ವಿಫಲವಾಗಿವೆ. ಹೀಗಾಗಿ, ಜೆಡಿಎಸ್ ಪಕ್ಷ ಶಾಂತಿಯನ್ನು ಕಾಪಾಡಲು ಸಾಹಿತಿಗಳೊಂದಿಗೆ ಸಭೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಗೆ ಶಾಂತಿ ಯಾತ್ರೆ ಮಾಡಲಾಗುವುದು ಎಂದು ಹೇಳಿದರು.

 ಶಾಂತಿ ಕಾಪಾಡುವುದಕ್ಕಾಗಿ ಜೆಡಿಎಸ್ ಪಕ್ಷ ಸಾಹಿತಿಗಳೊಂದಿಗೆ ಸಭೆ ನಡೆಸಿ ಶಾಂತಿ ಯಾತ್ರೆ ಕೈಗೊಳ್ಳಲಿದೆಯೇ ವಿನಹ ಯಾವುದೇ ರಾಜಕೀಯ ಉದ್ದೇಶಕ್ಕಲ್ಲ. ಈ ಸಭೆಗೆ ಎಡ-ಬಲ ಸಾಹಿತಿಗಳು ಎನ್ನದೆ ಎಲ್ಲ ಸಾಹಿತಿಗಳು ಭಾಗವಹಿಸಲಿದ್ದಾರೆ. ಅಲ್ಲದೆ, ಸದ್ಯದಲ್ಲಿಯೇ ಸಭೆ ಕರೆಯಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News