ಕೆ ಸಿ ಎಫ್ ಮಸ್ಕತ್ ಝೋನ್: ಅಧ್ಯಕ್ಷರಾಗಿ ಝುಬೈರ್ ಸಅದಿ ಪಾಟ್ರಕೋಡಿ

Update: 2017-07-20 06:57 GMT

ಮಸ್ಕತ್, ಜು. 20: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ  ಮಸ್ಕತ್ ಝೋನ್ ಸಭೆಯು ಇತ್ತೀಚೆಗೆ ಕೆ ಸಿ ಎಫ್ ಕಚೇರಿ  ಗೋಬ್ರದಲ್ಲಿ   ಝೋನ್ ಅಧ್ಯಕ್ಷ ಅಕ್ಬರ್ ಅಲಿ ಉಪ್ಪಳ್ಳಿ  ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಉಬೈದುಲ್ಲಾ ಸಖಾಫಿ ಧಾರ್ಮಿಕವಾಗಿ ಹೇಗೆ ಮುಂದುವರಿಯ ಬೇಕು ಮತ್ತು ಒಬ್ಬ ಕಾರ್ಯಕರ್ತನ ಸ್ವಭಾವ  ನಡೆ ನುಡಿ ಹೇಗಿರ ಬೇಕೆಂದು ವಿವರಿಸಿದರು

ಅಕ್ಬರ್ ಅಲಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಾರ್ಯದರ್ಶಿ ಶಫೀಕ್ ಮಾರ್ಣಬೈಲ್ ವಾರ್ಷಿಕ ವರದಿ ವಾಚಿಸಿದರು. 

ಇಹ್ಸಾನ್ ಕರ್ನಾಟಕದ ಒಮಾನ್ ಪ್ರತಿನಿಧಿ ಖಲಂದರ್  ಉಸ್ತಾದ್ ವರ್ಕರ್ಸ್ ಎಂಬ ವಿಷಯದ ಬಗ್ಗೆ ಮಾತನಾಡಿದರು. 

ಕೆ ಸಿ ಎಫ್ ಒಮಾನ್ ರಾಷ್ಟ್ರೀಯ ಸಂಘಟನಾಧ್ಯಕ್ಷ  ಹನೀಫ್ ಸಅದಿ ಚುಣಾವನೆ ನಡೆಸಿ, ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. 

ಅಧ್ಯಕ್ಷರಾಗಿ ಝುಬೈರ್ ಸಅದಿ ಪಾಟ್ರಕೋಡಿ, ಪ್ರಧಾನ ಕಾರ್ಯದರ್ಶಿಯಗಿ ಮುಹಮ್ಮದ್ ಕಿಲ್ಲೂರ್, ಕೋಶಾಧಿಕಾರಿ ಆದಂ ಮುಳರ್ಪಟ್ನ, ಸಂಘಟನಾ ಧ್ಯಕ್ಷರಾಗಿ ಖಲಂದರ್ ಬಾವ ಉಸ್ತಾದ್, ಸಂಘಟನಾ ಕನ್ವೀನರಾಗಿ ಶಫೀಕ್ ಪಿಕೆ ಮಾರ್ಣಬೈಲ್, ಶಿಕ್ಷಣಾಧ್ಯಕ್ಷರಾಗಿ ಇಕ್ಬಾಲ್ ಮದನಿ ಚೆನ್ನಾರ್, ಕನ್ವೀನರಾಗಿ ಫಾರೂಕ್ ಕುಕಾಜೆ, ರಿಲೀಫ್ ಅಧ್ಯಕ್ಷರಾಗಿ ಅಬ್ದುಲ್ ಗಫ್ಫಾರ್ ಹಾಜಿ ನಾವುಂ, ಕನ್ವೀನರ್ ನಿಝಾರ್ ಮರ್ದಾಳ ಕಡಬ, ಕಚೇರಿ ವಿಭಾಗಾಧ್ಯಕ್ಷರಾಗಿ ಝುಬೈರ್ ಖಾಝಿ ತುಮಕೂರು, ಕನ್ವೀನರ್ ಮುಹಮ್ಮದ್ ಶರೀಫ್ ಕೆರಲಿಯನ್, ಮೀಡಿಯಾ  ಕನ್ವೀನರಾಗಿ  ಮುಹಮ್ಮದ್  ನವಾಝ್ ಮಣಿಪು, ಸಲಹಾ ಸಮಿತಿ ಸದಸ್ಯರಾಗಿ ಉಮ್ಮರ್ ಸಖಾಫಿ ಮಿತ್ತೂರು, ಹನೀಫ್ ಸಅದಿ ಕುಡ್ತಮುಗರ್, ಉಬೈದುಲ್ಲಾಹ್ ಸಖಾಫಿ ಮಿತ್ತೂರು,  ಹಂಝ ಹಾಜಿ ಕಣ್ಣಂಗಾರ್, ಅಯ್ಯೂಬ್ ಕೋಡಿ, ಆರಿಫ್ಕೋಡಿ, ಮುಹಮ್ಮದ್ ಸಾಗರ್, ಮುಖ್ತಾರ್ ಪೊಯ್ಯತ್ ಬೈಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಶಾಕಿರ್ ಮೌಲಾನ ತೋನ್ಸೆ, ನಿಝಾರ್ ಝುಹ್ರಿ ಕನ್ಯಾನ, ಇಬ್ರಾಹಿಂ ಅತ್ರಾಡಿ,  ಶಮೀರ್ ಉಸ್ತಾದ್ ತೋನ್ಸೆ,  ಶೈಖ್ ಝಿಯಾರ್,  ರಫೀಕ್ ಸಾಸ್ತಾನ್,  ಅಕ್ಬರ್ ಅಲಿ ಉಪ್ಪಳ್ಳಿ, ಇಬ್ರಾಹಿಂ ಸುಳ್ಯ,  ಹನೀಫ್ ಮನ್ನಾಪು, ಅಶ್ರಫ್ ಭಾರತ್ ಬೆಲ್ಲಾರೆ, ಅಬ್ಬಾಸ್ ಮರಕ್ಕಡ, ಹೈದರ್ ಕಲ್ಕಟ್ಟ್,  ಸ್ವಾದಿಕ್  ಉಪ್ಪಿನಂಗಡಿ, ಫಯಾಝ್ ಕಾರ್ಕಳ, ಲತೀಫ್ ತೋಡಾರ್ ರವರನ್ನು ಆಯ್ಕೆಮಾಡಿದರು.

ಸಭೆಯಲ್ಲಿ ಕೆ ಸಿ ಎಫ್ ಒಮಾನ್ ಇಹ್ಸಾನ್ ಚೆಯರ್ ಮೇನ್ ಇಬ್ರಾಹಿಂ ಆತ್ರಾಡಿ ಹಾಗೂ ಸಾಂತ್ವನಾಧ್ಯಕ್ಷ ಅಯ್ಯೂಬ್ ಕೋಡಿ ಯವರು ಮಾತನಾಡಿ  ಪ್ರಸ್ತುತ  ಸಮಿತಿ ಖಾರ್ಯವೈಕರಿಗಳನ್ನುಶ್ಲಾಗಿಸುತ್ತಾ ನೂತನ ಸಮಿತಿಗೆ ಶುಭ ಹಾರೈಸಿದರು.  ಫಾರೂಕ್ ಕುಕ್ಕಾಜೆ   ಸ್ವಾಗತಿಸಿ ನೂತನ ಕಾರ್ಯದರ್ಶಿ  ಮುಹಮ್ಮದ್  ಕಿಲ್ಲೂರ್   ವಂದಿಸಿದರು.

Writer - ಅಬ್ದುಲ್ ಮುಬಾರಕ್ ಕಾರಾಜೆ

contributor

Editor - ಅಬ್ದುಲ್ ಮುಬಾರಕ್ ಕಾರಾಜೆ

contributor

Similar News