ವಾಹನದಲ್ಲಿ ಯುವಕ ಸಜೀವ ದಹನ

Update: 2017-07-21 13:56 GMT

ಬೆಂಗಳೂರು, ಜು.21: ಚಲಿಸುತ್ತಿದ್ದ ವಾಹನದಲ್ಲಿ ಯುವಕನೊಬ್ಬ ಸುಟ್ಟು ಸಜೀವ ದಹನವಾಗಿರುವ ದುರ್ಘಟನೆ ಇಲ್ಲಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಬನ್ನೇರುಘಟ್ಟದ ಶಿಲೀಂಧ್ರದೊಡ್ಡಿ ನಿವಾಸಿ ರಮೇಶ್(25) ಮೃತಪಟ್ಟಿರುವ ಯುವಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬನ್ನೇರುಘಟ್ಟದಲ್ಲಿ ಮಟನ್ ಅಂಗಡಿ ಇಟ್ಟುಕೊಂಡಿರುವ ರಮೇಶ್ ಗುರುವಾರ ಮಧ್ಯೆರಾತ್ರಿ 11 ಗಂಟೆ ಸುಮಾರಿಗೆ ಟಾಟಾಏಸ್ ವಾಹನದಲ್ಲಿ ಗ್ಯಾಸ್‌ಸಿಲಿಂಡರ್ ಇಟ್ಟು ಮನೆಗೆ ಬರುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಸಜೀವ ದಹನ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಂಕೆ: ವಾಹನದಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿರಬಹುದೆ ಅಥವಾ ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡು ವಾಹನದಲ್ಲೇ ಬೆಂಕಿಗಾಹುತಿಯಾಗಿರಬಹುದೆ ಅಥವಾ ಯಾರಾದರೂ ಈತನಿಗೆ ಬೆಂಕಿ ಹಚ್ಚಿರಬಹುದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News