​ಕಾರು ಚಾಲಕ ಆತ್ಮಹತ್ಯೆ

Update: 2017-07-21 13:59 GMT

ಬೆಂಗಳೂರು, ಜು.21: ಕಾರು ಚಾಲಕನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬೋವಿ ಕಾಲೋನಿಯ 16ನೆ ಕ್ರಾಸ್‌ನಲ್ಲಿ ವಾಸಿಸುತ್ತಿದ್ದ ಮುನಿರಾಜು(30) ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ.

ಮದ್ಯ ಸೇವನೆ ಚಟ ಅಂಟಿಸಿಕೊಂಡಿದ್ದ ಮುನಿರಾಜು ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಎರಡು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿರಲಿಲ್ಲ. ಮನೆ ಮಾಲಕರು ಬಾಡಿಗೆ ಕಟ್ಟುವಂತೆ ಒತ್ತಡ ತಂದಿದ್ದರು. ಇದರಿಂದ ನೊಂದ ಆತ ಪತ್ನಿ ಲಕ್ಷ್ಮೀ ಗುರುವಾರ ಬೆಳಗ್ಗೆ ಮನೆಕೆಲಸಕ್ಕೆ ಹೋದ ನಂತರ ಮದ್ಯ ಸೇವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಲಕ್ಷ್ಮೀ ಅವರ ತಾಯಿ ಮಧ್ಯಾಹ್ನ 3ರ ವೇಳೆ ಮನೆಗೆ ಬಂದು ನೋಡಿದಾಗ ಮುನಿರಾಜು ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News