ಬಿಜೆಪಿಯ ಪ್ರತಿಕಾರದ ಕ್ರಮ : ಅಹ್ಮದ್ ಪಟೇಲ್

Update: 2017-08-02 05:48 GMT

ಹೊಸದಿಲ್ಲಿ, ಆ.2: ಇಂಧನ  ಸಚಿವ ಡಿಕೆ ಶಿವಕುಮಾರ್,   ಅವರ ಸಂಬಂಧಿಕರು ಮತ್ತು ಅವರ ಆಪ್ತರ ಮನೆ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ “ಇದು ಬಿಜೆಪಿಯ ಹಿಂದೆಂದೂ ನಡೆಯದ  ಪ್ರತಿಕಾರದ ಕ್ರಮ..”  ಎಂದು ಹೇಳಿದ್ದಾರೆ.

ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿ ಏನನ್ನಾದರೂ ಮಾಡಲು ಸಿದ್ದ . ಇದು ಬಿಜೆಪಿ ಹತಾಶೆಯನ್ನು ಎತ್ತಿ ತೋರಿಸುತ್ತದೆ  ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಹ್ಮದ್ ಪಟೇಲ್ ಗುಜರಾತ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಸೋಲಿಸಲು ಬಿಜೆಪಿ ನಡೆಸಿರುವ  ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಣ ತಂತ್ರವನ್ನು ರೂಪಿಸಿ ಗುಜರಾತ್ ನ ಶಾಸಕರನ್ನು ಬೆಂಗಳೂರಿಗೆ ರವಾನಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News