ಗೃಹ ರಕ್ಷಕ ಪದಕ ಪ್ರಕಟ

Update: 2017-08-14 15:14 GMT

ಬೆಂಗಳೂರು, ಆ.14: ಕರ್ನಾಟಕ ಗೃಹರಕ್ಷಕ ಹಾಗೂ ಪೌರಕ್ಷಣಾ ಇಲಾಖೆಗಳಲ್ಲಿ ಸಲ್ಲಿಸಿರುವ ಶ್ಲಾಘನೀಯ ಸೇವೆಯನ್ನು ಪುರಸ್ಕರಿಸಿ ರಾಷ್ಟ್ರಪತಿಗಳು ಪ್ರದಾನಿಸುವ ಪ್ರಸ್ತುತ ಸಾಲಿನ ಗೃಹರಕ್ಷಕ-ಪೌರಕ್ಷಣಾ ಸೇವಾ ಪದಕಗಳು ಪ್ರಕಟಗೊಂಡಿವೆ.

ವಿಶಿಷ್ಟ ಸೇವಾ ಪದಕ-ಮಂಗಳೂರಿನ ಗೃಹ ರಕ್ಷಕ ದಳದ ಉಪ ಸಮಾದೇಷ್ಟರಾದ ರಮೇಶ್ ಆಯ್ಕೆಯಾಗಿದ್ದಾರೆ. ಅದೇ ರೀತಿ, ಶ್ಲಾಘನೀಯ ಸೇವಾ ಪದಕಕ್ಕೆ ದಾವಣಗೆರೆ ಗೃಹ ರಕ್ಷಕ ದಳದ ಹಿರಿಯ ಫ್ಲಟೂನ ಕಮಾಂಡರ್ ಎಚ್.ಜೆ.ಚಂದ್ರಕಾಂತ್, ಬಳ್ಳಾರಿಯ ಗೃಹ ರಕ್ಷಕ ದಳದ ಫ್ಲಟೂನ್ ಕಮಾಂಡರ್ ಬಸವಲಿಂಗ, ತುಮಕೂರಿನ ಸಾರ್ಜೆಂಟ್ ಪಿ.ಟಿ.ಬಸವರಾಜಪ್ಪ, ಬೆಂಗಳೂರು ಉತ್ತರ ಜಿಲ್ಲೆಯ ಸೆಕ್ಷನ್ ಲೀಡರ್ ಕೆ.ವಿ.ಮಂಜುನಾಥ್ ಆಯ್ಕೆಗೊಂಡಿರುವುದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News