ಅನಿವಾಸಿ ಕನ್ನಡಿಗರಿಂದ ಮದೀನಾದಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-15 12:56 GMT

ಮದೀನಾ, ಆ. 15: ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಸೆಕ್ಟರ್ ವತಿಯಿಂದ ದ್ವೇಷ ತೊಲಗಲಿ, ದೇಶ ಬೆಳಗಲಿ ಧ್ಯೇಯ ವಾಕ್ಯದೊಂದಿಗೆ, ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ  ಫಾರೂಕ್ ನ ಈಮಿ ಸರಳಿಕಟ್ಟೆ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ವಹಿಸಿ, ನಂತರ ಮಾತನಾಡಿದರು. ಸಯ್ಯದ್ ಖ್ವಾಜ ಜಿಸ್ತಿ  ತಂಙಳ್ ಹೈದರಬಾದ್ ದುವಾ ನಿರ್ವಹಿಸಿ, ಭಾರತೀಯರಿಗೆ ಸ್ವಾತಂತ್ರೋತ್ಸವ ಶುಭಾಶಯ ಕೋರಿದರು.

ಈ ಸಂದರ್ಭ ಅಬ್ದುಲ್ಲಾ ಮದನಿ, ಇಸ್ಮಾಯಿಲ್ ಕಿನ್ಯಾ, ಅಶ್ರಫ್ ಕಿನ್ಯಾ, ತಾಜುದ್ದೀನ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಉಮ್ಮರ್ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹುಸೈನಾರ್ ಮಾಪಳ್ ವಂದಿಸಿದರು.

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News