ಪ್ರತ್ಯೇಕ ಪ್ರಕರಣ:ರೈಲಿಗೆ ಸಿಕ್ಕಿ ಇಬ್ಬರು ಮೃತ್ಯು

Update: 2017-08-15 14:36 GMT

ಬೆಂಗಳೂರು, ಆ.15: ನಗರದಲ್ಲಿಂದು ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಇಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿರುವ ದುರ್ಘಟನೆ ನಡೆಸಿದೆ.

ನಗರದ ಯಲಹಂಕ, ಯಶವಂತಪುರ ರೈಲ್ವೇ ನಿಲ್ದಾಣಗಳ ಮಧ್ಯೆ ಕಾಲುಹಾದಿ ಮೂಲಕ ಮಂಗಳವಾರ ಮುಂಜಾನೆ ತಮಿಳುನಾಡು ಮೂಲದ ಮೋಹನ್ ಎಂಬುವರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ನಾಯಡಂಹಳ್ಳಿ ಹಾಗೂ ಸಿಟಿ ರೈಲ್ವೇ ಮಧ್ಯೆ ಕಡಪ ಸ್ವಾಮಿ ಮಠದ ಸಮೀಪ ಕಾರು ಚಾಲಕ ಬಾಶಾ(51) ಎಂಬಾತ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಿಟಿ ರೈಲ್ವೇ ನಿಲ್ದಾಣ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News