ಉಗ್ರರಿಂದ ಗುಂಡಿನ ದಾಳಿ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮೃತ್ಯು
Update: 2017-09-09 17:44 GMT
ಶ್ರೀನಗರ, ಸೆ. 9: ಅನಂತ್ನಾಗ್ ಪಟ್ಟಣದಲ್ಲಿ ಶನಿವಾರ ಸಂಜೆ ಪೊಲೀಸರ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಪೊಲೀಸ್ ಸಿಬ್ಬಂದಿ ಹತರಾಗಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಪಟ್ಟಣದ ಬಸ್ಸ್ಟಾಂಡ್ನ ಸಮೀಪ ಪೊಲೀಸ್ ಸಿಬ್ಬಂದಿಗೆ ಉಗ್ರರು ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಇಮ್ತಿಯಾಜ್ ಅಹ್ಮದ್ ಮೃತಪಟ್ಟಿದ್ದಾರೆ. ಕಾನ್ಸ್ಟೇಬಲ್ ಶಬೀರ್ ಅಹ್ಮದ್ ಗಾಯಗೊಂಡಿದ್ದಾರೆ.
ಗೃಹ ಸಚಿವರು ಸಿಆರ್ಪಿಎಫ್ ಯೋಧರೊಂದಿಗೆ ನಾಳೆ ರವಿವಾರ ಮಾತುಕತೆ ನಡೆಸಲಿರುವ ಪ್ರಸ್ತಾಪಿತ ಸ್ಥಳಕ್ಕಿಂತ 1 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವನ್ನು ಸುತ್ತುವರಿಯಲಾಗಿದೆ. ಹಾಗೂ ಉಗ್ರರ ಬೇಟೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.