ಆಧಾರ್ ನಂಬರ್ ನೀಡದವರಿಗೆ ಪಡಿತರ ಇಲ್ಲ

Update: 2017-09-21 10:41 GMT

ಕಾಸರಗೋಡು,ಸೆ.21: ಆಧಾರ್ ನಂಬರನ್ನು ಈ ತಿಂಗಳ 30 ತಾರೀಕಿನೊಳಗೆ ಕೊಡದಿದ್ದರೆ, ಅಂತಹ ಫಲಾನುಭವಿಗಳಿಗೆ ಪಡಿತರ ವಿತರಣೆಯಿಲ್ಲ ಎಂದು ಕೇರಳ ಸಾರ್ವಜನಿಕ ವಿತರಣಾ ಇಲಾಖೆ ತಿಳಿಸಿದೆ. ಆಧಾರ್ ನಂಬರ್ ನೀಡಿ ಅದರ ಸಿಂಧುತ್ವವನ್ನು ರುಜುಪಡಿಸಿದವರಿಗೆ ಮಾತ್ರ  ಪಡಿತರ ಸಮಾಗ್ರಿ ಕೊಡಬೇಕೆಂದು ಕೇಂದ್ರ ಆಹಾರ ಸಚಿವಾಲಯದ ಆದೇಶವಿದ್ದು, ಈ  ಆಧಾರದಲ್ಲಿ ಕ್ರಮ ಜರಗಿಸಲಾಗುತ್ತಿದೆ ಕೇರಳ ಸಾರ್ವಜನಿಕ ವಿತರಣಾ ಇಲಾಖೆ ತಿಳಿಸಿದೆ.

ಸೆ.30ರೊಳಗೆ ಆಧಾರ್ ನಂಬರ್ ಕೊಡುವ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ.  ಈವರೆಗೆ ಪಡಿತರ ಅಂಗಡಿಯ ಮೂಲಕ ಆಧಾರ್ ನಂಬರ್ ಸ್ವೀಕರಿಸಲಾಗಿದೆ. ಆಧಾರ್ ನಂಬರ್ ಕೊಟ್ಟವರ ಪಟ್ಟಿಯನ್ನು ಎಲ್ಲ ಪಡಿತರ ಅಂಗಡಿಗಳಿಗೆ ಒದಗಿಸಲಾಗುವುದು ಎಂದು ಸಾರ್ವಜನಿಕ ವಿತರಣಾ ಇಲಾಖೆಯ ನಿರ್ದೇಶಕ ತಿಳಿಸಿದ್ದಾರೆ.

ಸಾರ್ವಜನಿಕ ವಿತರಣಾ ಇಲಾಖೆಯಲ್ಲಿ ಪಾರದರ್ಶಕತೆಗಾಗಿ  ರೇಶನ್ ಕಾರ್ಡಿನ ಸದಸ್ಯರ ಆಧಾರ್ ನಂಬರನ್ನು ಸಂಗ್ರಹಿಸಲಾಗುತ್ತಿದೆ. ಈ  ಮೂಲಕ ರೇಶನ್ ವಸ್ತುಗಳ ಸೋರಿಕೆ, ದುರುಪಯೋಗ ತಡೆಯಬಹುದಾಗಿದೆ ಎಂದು ಅಧಿಕಾರಿಗಳು  ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News