ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ: ಆರೋಪಿಗಳ ಬಂಧನಕ್ಕೆ ಶೋಧ

Update: 2017-09-24 15:11 GMT

ಬೆಂಗಳೂರು, ಸೆ.24: ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಜಗಳ ತೆಗೆದು ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕೆಲ ದಿನಗಳ ಹಿಂದೆ ಆಫ್ರಿಕನ್ ಪ್ರಜೆಗಳ ಎರಡು ಗುಂಪಿನ ನಡುವೆ ಜಗಳ ನಡೆದಿತ್ತು. ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದು, ಈ ಗಲಾಟೆಯಲ್ಲಿ ಚಿಗೋಚಿ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಪೊಲೀಸರು ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಇದೇ ದ್ವೇಷಕ್ಕೆ ಚಿಗೋಚಿ ಕಡೆಯವರು ನೈಜೀರಿಯಾ ಪ್ರಜೆ ಎಲ್ವಿನ್ ಮನೆ ಬಳಿ ಹೋಗಿ ಆತನೊಂದಿಗೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ. ನಂತರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News