ದಸರಾ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯಿತಿಗೆ ವಿಶೇಷ ಪ್ರವೇಶ ವ್ಯವಸ್ಥೆ: ಜಿಲ್ಲಾಧಿಕಾರಿ ಡಿ.ರಂದೀಪ್

Update: 2017-09-28 17:28 GMT

ಮೈಸೂರು, ಸೆ.28: ವಿಶ್ವವಿಖ್ಯಾತ ಮೈಸೂರು ದಸರಾ 2017ರ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನಕವಾಯಿತು ಕಾರ್ಯಕ್ರಮಗಳಿಗೆ ವಿಶೇಷ ಪ್ರವೇಶ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ.

ಗುರುವಾರ ಅರಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಮನೆಯಲ್ಲಿ 25,400 ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅರಮನೆಯಲ್ಲಿ ಒಟ್ಟು 17 ಆವರಣದಲ್ಲಿ ವ್ಯವಸ್ಥೆಯಿದೆ. ಒಟ್ಟು 10 ದ್ವಾರಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಬನ್ನಿಮಂಟಪದಲ್ಲಿ 26,200 ಆಸನ ವ್ಯವಸ್ಥೆ ಮಾಡಲಾಗಿದ್ದು, ಇಡೀ ಮೈದಾನದಲ್ಲಿ 15 ಆವರಣ, ಪಾರ್ಕಿಂಗ್ ವಲಯ 3, ಭಾಗವಹಿಸುವ ಕಲಾವಿದರು 2000, 60 ಕಲಾತಂಡಗಳಿವೆ, 10 ದ್ವಾರಗಳಿಂದ ಬನ್ನಿಮಂಟಪಕ್ಕೆ ಪ್ರವೇಶ ಕಲ್ಪಿಸಲಾಗಿದೆ. 8ಪಾರ್ಕಿಂಗ್ ವಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕವಾಯಿತಿನಲ್ಲಿ 2300 ಕಲಾವಿದರು ಭಾಗವಹಿಸಲಿದ್ದಾರೆ. ಪಂಜಿನ ಕವಾಯತು ಪ್ರದರ್ಶನಕ್ಕೆ ಟಿಕೇಟ್ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಸ್ ಹಾಗೂ ಟಿಕೇಟ್ ಹೊಂದಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಒಂದು ಪಾಸ್ ಅಥವಾ ಟಿಕೇಟ್‍ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶವಿದೆ. ಅರಮನೆಗೆ 12.30ರ ಬಳಿಕ ಪ್ರವೇಶ ನೀಡಲಾಗುವುದು ಎಂದ ಅವರು, ಬನ್ನಿಮಂಟಪಕ್ಕೆ 6.30 ನಂತರ ಪ್ರವೇಶ. ಈ ಬಾರಿ ಬಾರ್‍ ಕೋಡಿಂಗ್ ಹಾಗೂ ಇನ್‍ಪ್ಪ್ಯೂಸ್ಡ್ ಪೇಪರ್‍ನಲ್ಲಿ  ಮುದ್ರಣವಾಗಿದೆ. ಯಾವುದೇ ಕಾರಣಕ್ಕೂ ನಕಲಿ ಪಾಸ್ ಅಥವಾ ಟಿಕೇಟ್ ಮುದ್ರಿಸಲು ಸಾಧ್ಯವಿಲ್ಲ ಎಂದರು.

ಸಾರ್ವಜನಿಕರು ಯಾವುದೇ ನೀರಿನ ಬಾಟಲ್ ಹಾಗೂ ಇತರೆ ಪದಾರ್ಥಗಳನ್ನು ಒಳಗೆ ತರಬಾರದು. ಮ್ಯಾಚ್ ಬಾಕ್ಸ್, ಲೈಟರ್, ಸಿಗರೇಟ್ ಇತರೆ ವಸ್ತುಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿದೆ. ಲಗೇಜ್ ವ್ಯಾನಿಟಿ ಬ್ಯಾಗ್ ಕೂಡ ತರಬಾರದು. ಗ್ಯಾಂಗ್ ವೇಗಳನ್ನು ಜಂಪ್ ಮಾಡುವಂತಿಲ್ಲ. ಎನ್ ಕ್ಲೋಸರ್ ಗಳನ್ನು ಬದಲಾಯಿಸುವಂತಿಲ್ಲ. ಅಲ್ಲದೆ, ಕುರ್ಚಿಗಳನ್ನು ಒಂದರ ಮೇಲೊಂದು ಹಾಕಿ ಕೂರಬಾರದು. ಕುರ್ಚಿಗಳ ಮೇಲೆ ನಿಂತು ವೀಕ್ಷಿಸುವುದಕ್ಕೆ ಅವಕಾಶವಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಸಣ್ಣಮಕ್ಕಳನ್ನು ಕರೆತರಬಾರದು. ಅನಧೀಕೃತ ವ್ಯಕ್ತಿಗಳಿಂದ ದಸರಾ ವೀಕ್ಷಣೆಯ ಟಿಕೇಟ್ ಖರೀದಿಸಬೇಡಿ ಎಂದು ಸೂಚಿನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ವಿಷ್ಣುವರ್ಧನ್, ವಿಕ್ರಮ ಆಮ್ಟೆ, ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್, ಸುಬ್ರಹ್ಮಣಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್, ವಾರ್ತಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News