ಅದ್ದೂರಿಯಾಗಿ ಜರುಗಿದ ಮೈಸೂರು ದಸರಾ ಜಂಬೂ ಸವಾರಿ; ಲಕ್ಷಾಂತರ ಜನರಿಂದ ಚಿನ್ನದ ಅಂಬಾರಿ ವೀಕ್ಷಣೆ

Update: 2022-10-05 16:48 GMT

ಮೈಸೂರು,ಅ.5: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಬುಧವಾರ ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಜನರು ಚಿನ್ನದ ಚಿನ್ನದ ಅಂಬಾರಿ ವೀಕ್ಷಣೆ ಮಾಡಿದರು. 

ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ 48 ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಿತು. ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಪುನೀತ್ ರಾಜಕುಮಾರ್ ಮತ್ತು ವನ್ಯಧಾನವನ್ನೊಳಗೊಂಡ ಮಹದೇಶ್ವರ ಬೆಟ್ಟದ ಸ್ತಬ್ಧ ಚಿತ್ರ ಗಮನ ಸೆಳೆಯಿತು.

ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಸಂಜೆ 5.07 ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾದ ದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡಿದರು.

ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ರಾಜಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಸಾಗಿದ್ದು, ಜನರು ಹರ್ಷಚಿತ್ತರಾಗಿ ಚಿನ್ನದ ಅಂಬಾರಿಯನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಸ್ಥಬ್ದ ಚಿತ್ರಗಳು ಮತ್ತು ಕಲಾತಂಡಗಳ ಮೆರವಣಿಗೆ ನಡೆಯಿತು.

ಜಿಲ್ಲಾವಾರು ಭಾಗವಹಿಸಿದ ಸ್ತಬ್ಧ ಚಿತ್ರಗಳ ಪಟ್ಟಿ:

ಚಾಮರಾಜನಗರ-ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್ ರಾಜ್ ಕುಮಾರ್ ಪ್ರತಿಮೆ. ಮಂಡ್ಯ-ಮಂಡ್ಯ ಜಿಲ್ಲೆಯ ದೇವಾಲಯಗಳು, 
ಮೈಸೂರು-ಮೈಸೂರು ಜಿಲ್ಲೆಯ ವಿಶೇಷತೆಗಳು, ರಾಯಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ, ರಾಮನಗರ-ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ, ಶಿವಮೊಗ್ಗ-ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ, ತುಮಕೂರು-ನಿಟ್ಟೂರಿನ ಎಚ್‍ಎಎಲ್ ತಯಾರಿಕಾ ಘಟಕ, ಪಾವಗಡದ ಬೃಹತ್ ಸೋಲಾರ್ ಪಾರ್ಕ್, ಉಡುಪಿ-ಜಿ.ಐ.ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ

ಉತ್ತರ ಕನ್ನಡ-ಕಾರವಾರ ನೌಕಾಶಾಲೆ, ವಿಜಯಪುರ-ಸಿದ್ದರಾಮೇಶ್ವರ ದೇವಸ್ಥಾನ, ಬಾಗಲಕೋಟೆ-ಮುದೋಳ್ ಶ್ವಾನಗಳು, ಇಳಕಲ್ ಸೀರೆ,
ಬಳ್ಳಾರಿ-ದುರ್ಗಮ್ಮ ದೇವಸ್ಥಾನ, ಬೆಳಗಾವ್-ಶ್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ, ಬೆಂಗಳೂರು(ಗ್ರಾ)-ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ, 

ಬೆಂಗಳೂರು(ನ)-ಕಡಲೆಕಾಯಿ ಪರೀಷೆ, ಬಸವಣ್ಣಗುಡಿ, ಬೀದರ್-ಅನುಭವ ಮಂಟಪ, ಚಿಕ್ಕಬಳ್ಳಾಪುರ-ಗ್ರೀನ್ ನಂದಿ, ಭೋಗನಂದೀಶ್ವರ ದೇವಸ್ಥಾನ, ಚಿಕ್ಕಮಗಳೂರು-ಸಪ್ತನದಿಗಳ ತವರು, ಚಿತ್ರದುರ್ಗ-ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ಥಂಭ, ದಕ್ಷಿಣ ಕನ್ನಡ-ಕಂಬಳ, ಹುಲಿವೇಷ, ಭೂತಕೋಲ, ದಾವಣಗೆರೆ-ಸಂತೆ ಬೆನ್ನೂರು, ಪುಷ್ಕರಣಿ, ಧಾರವಾಡ- ಸಂಗೀತ ದಿಗ್ಗಜರು, ಗದಗ-ಶ್ರೀಕ್ಷೇತ್ರ ಶ್ರೀಮಂತಗಢ, ಹೊಳಲಮ್ಮ ದೇವಿ, ಶಿವಾಜಿ, ಹಾಸನ-ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ-ಗೊಮ್ಮಟಗಿರಿ, ಹಾವೇರಿ-ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕ್ತೇಶ್ವರ ದೇವಾಲಯ, ಕಲಬುರ್ಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ಕೊಡಗು-ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ, ಕೋಲಾರ-ಬಿ.ಕೆ.ಎಸ್ ಅಯ್ಯಂಗಾರ್ ಯೋಗಥಾನ್, ಅಂತರಗಂಗೆ ಬೆಟ್ಟ, ಕೊಪ್ಪಳ-ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ, ವಿಜಯನಗರ-ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ, ಯಾದಗಿರಿ-ಸುರಪುರ ಕೋಟೆ, ಸ್ತಬ್ಧಚಿತ್ರಗಳ ಉಪಸಮಿತಿ, ಅರಮನೆ ವಾದ್ಯಗೋಷ್ಠಿ, ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ, ಆಜಾದಿ ಕಾ ಅಮೃತ ಮಹೋತ್ಸವ, ಇಲಾಖಾವಾರು ಸಮಾಜ ಕಲ್ಯಾಣ ಇಲಾಖೆ-ಸಾಮಾಜಿಕ ನ್ಯಾಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ-ಐಟಿಐ, ಜಿಟಿಟಿಸಿ, ಕೌಶಲ ತರಬೇತಿ, ಹಾಲು ಉತ್ಪಾದಕರ ಮಹಾಮಂಡಲ-ನಂದಿನಿ ಕ್ಷೀರಧಾರೆ-ಉತ್ಪನ್ನಗಳು. ಮೈಸೂರು ವಿಶ್ವವಿದ್ಯಾಲಯ-106 ವರ್ಷಗಳ ಇತಿಹಾಸ. ಕಾವೇರಿ ನೀರಾವರಿ ನಿಗಮ-ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಗಳು. ಸೆಸ್ಕ್-ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ, ವಾರ್ತಾ ಮತ್ತು ಪ್ರಚಾರ ಇಲಾಖೆ-ಇಲಾಖೆ ಕಾರ್ಯಕ್ರಮಗಳು, ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್ ಉತ್ಪನ್ನಗಳು, ಅಖಿಲ ಭಾರತ ವಾಕ್ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಆರ್ಥಿಕ ಹೊರೆಯಿಂದ ರಕ್ಷಣೆ, ನಮ್ಮ ಕ್ಲಿನಿಕ್, ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀಮಹದೇಶ್ವರ ಜ್ಯೋತಿ ಸ್ವೀಕಾರ. ಪ್ರವಾಸೋದ್ಯಮ ಇಲಾಖೆ-ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ ಸೇರಿದಂತೆ 47 ಸ್ಥಬ್ದ ಚಿತ್ರಗಳು, 50 ಕಲಾ ತಂಡಗಳು ಮೆರವಣಿಯಲ್ಲಿ ಭಾಗವಹಿಸಿದ್ದವು. 
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News