ನ್ಯೂಝಿಲೆಂಡ್ ವಿರುದ್ಧ ಮೊದಲ ಏಕದಿನ: ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ಕೆ

Update: 2017-10-22 08:42 GMT

ಮುಂಬೈ, ಅ.22: ನ್ಯೂಝಿಲೆಂಡ್ ವಿರುದ್ಧ ರವಿವಾರ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

 ಅಚ್ಚರಿಯ ಹೆಜ್ಜೆಯೊಂದರಲ್ಲಿ ಭಾರತ ಮನೀಷ್ ಪಾಂಡೆಯವರನ್ನು ಕೈಬಿಟ್ಟು ದೇಶೀಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದೆ. ಶಿಖರ್ ಧವನ್ ಅವರು ಅಜಿಂಕ್ಯ ರಹಾನೆ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ನ್ಯೂಝಿಲೆಂಡ್ ತಂಡ ಏಕೈಕ ಸ್ಪಿನ್ನರ್‌ನ್ನು ಆಯ್ಕೆ ಮಾಡಿದೆ.

ಮಧ್ಯಮ ಕ್ರಮಾಂಕದಲ್ಲಿ ಟಾಮ್ ಲಥಾಮ್‌ಗೆ ಅವಕಾಶ ನೀಡಲು ನಿರ್ಧರಿಸಿರುವ ಕಿವೀಸ್ ಕ್ರಿಕೆಟ್ ತಂಡ ಮಾರ್ಟಿನ್ ಗಪ್ಟಿಲ್ ಜೋಡಿಯಾಗಿ ಕಾಲಿನ್ ಮುನ್ರೊರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News