ದಲಿತ ಮುಖಂಡ ಗೋಪಾಲ ಕಪ್ಪೆಟ್ಟು

Update: 2017-10-26 14:41 GMT

ಉಡುಪಿ, ಅ.26: ದಲಿತ ಸಂಘರ್ಷ ಸಮಿತಿಯ ಮುಖಂಡ ಹಾಗೂ ವಿವಿಧ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಕಪ್ಪೆಟ್ಟುವಿನ ಗೋಪಾಲ್ (47) ನಿಧನ ಹೊಂದಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಉದ್ಯೋಗಿಯಾಗಿದ್ದ ಇವರು, ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.

ಗೋಪಾಲ ಕಪ್ಪೆಟ್ಟು ನಿಧನಕ್ಕೆ ದಲಿತ ನಾಯಕ ಸುಂದರ ಕಪ್ಪೆಟ್ಟು, ಜಯನ್ ಮಲ್ಪೆ, ಕುಮಾರ್ ಕಪ್ಪೆಟ್ಟು, ಮಂಜುನಾಥ ಅಮೀನ್, ಮಾಧವ ನಿಟ್ಟೂರು, ಸತೀಶ್ ಕಪ್ಪೆಟ್ಟು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ