×
Ad

ಎಂ.ಎಸ್ ಸತ್ಯುಗೆ ಬಿ.ವಿ.ಕಾರಂತ ಪ್ರಶಸ್ತಿ

Update: 2017-11-03 19:20 IST

ಬೆಂಗಳೂರು, ನ. 3: ಹಿರಿಯ ನಿರ್ದೇಶಕ ಎಂ.ಎಸ್.ಸತ್ಯು ಅವರಿಗೆ 2017ನೆ ಸಾಲಿನ ಬಿ.ವಿ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಅದೇ ರೀತಿಯಲ್ಲಿ ಹುಬ್ಬಳ್ಳಿಯ ಥೇರೆಸಮ್ಮ ಡಿಸೋಜ ಅವರನ್ನು ಡಾ.ಗುಬ್ಬಿ ವೀರಣ್ಣ ಪ್ರಶಸ್ತಿಗೆ, ಮೈಸೂರಿನ ನಂದಿನಿ ಈಶ್ವರ್ ಅವರನ್ನು ಶಾಂತಲಾ ನಾಣ್ಯ ಪ್ರಶಸ್ತಿಗೆ ಹಾಗೂ ಹುಬ್ಬಳ್ಳಿಯ ಪ್ರಸಿದ್ಧ ತಬಲ ವಾದಕ ಪಂಡಿತ್ ರಘುನಾಥ್ ನಾಕೋಡ್ ಅವರನ್ನು ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News