ಇಂಡಿಯಾ ಫ್ರೆಟರ್ನಿಟಿ ಫೋರಮ್ ವತಿಯಿಂದ ಸ್ನೇಹಕೂಟ

Update: 2017-11-07 16:51 GMT

ರಿಯಾದ್, ನ.7: ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ “ಸ್ನೇಹ ಕೂಟ 2017” ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ರಿಯಾದ್ ನ ಅಲ್ ರುಶ್ದ್ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಜರುಗಿತು.

ಸಹಸ್ರ ಸಂಖ್ಯೆಯಲ್ಲಿ ಅನಿವಾಸಿ  ಭಾರತೀಯರು ಪಾಲ್ಗೊಂಡ ಈ ಕಾರ್ಯಕ್ರಮವು ಮಾಸ್ಟರ್   ಹಸನುಲ್ ಬನ್ನ ರವರ ಕಿರಾತ್ ಪಠಣದೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್, ಅಧ್ಯಕ್ಷ ಇಸ್ಮಾಯಿಲ್ ಇನೋಳಿ   ವಹಿಸಿ, ಮಾತನಾಡಿದ ಅವರು ಇಂಡಿಯಾ ಫ್ರೆಟರ್ನಿಟಿ ಫೋರಮ್ ನಡೆಸುತ್ತಿರುವ ಸಾಮಾಜಿಕ ಸೇವೆಯನ್ನು ಹಾಗು ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ  ವಿವರಿಸಿದರು.

ಕಾರ್ಯಕ್ರಮವನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಸೌದಿ ಅರೇಬಿಯಾದ ಅಧ್ಯಕ್ಷ ಬಶೀರ್ ಕೇರಳ ಉದ್ಘಾಟಿಸಿ,  ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಇದಕ್ಕಾಗಿ ಎಲ್ಲ ಸಮಾನ ಮನಸ್ಕರು ಜೊತೆಗೂಡ ಬೇಕೆಂದು ಕರೆ ನೀಡಿದರು. 

 ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಇಂಡಿಯನ್ ಸೋಷಿಯಲ್ ಫಾರಂ ದಮ್ಮಾಮ್ ರಾಜ್ಯ ಸಮಿತಿಯ ಸದಸ್ಯ ನಝೀರ್ ತುಂಬೆ,  ಪ್ರಸಕ್ತ ಇಂಡಿಯಾ ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಸರ್ಕಾರ ಇಂದು ಅಚ್ಛೆದಿನ್ ನ ಕನಸು ತೋರಿಸಿ, ಇಂದು ತಮ್ಮ ವೈಫಲ್ಯಗಳನ್ನು ಮರೆಮಾಚಲು ಅಮಾಯಕರ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡುತ್ತಿದೆ. ಅಹಿಂದ ಸಮಾಜದ  ಐಕ್ಯತೆಯಿಂದ ಮಾತ್ರ ಅಲ್ಪಸಂಖ್ಯಾತರ  ಸಬಲೀಕರಣ ಸಾದ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ ಏರ್ ಇಂಡಿಯಾ ರಿಯಾದಿನ ವ್ಯವಸ್ಥಾಪಕ ಕುಂದನ್ ಲಾಲ್ ಗೋತ್ವಾಲ್ ಮಾತನಾಡಿ , ಇಸ್ಲಾಂ ಶಾಂತಿ ಮತ್ತು ಸೌಹಾರ್ದತೆಯ ಧರ್ಮವಾಗಿದ್ದು, ಸಮಾಜ ಸೇವೆಯನ್ನು ಮಾಡಲು ಪ್ರೇರೇಪಿಸುತ್ತದೆ, ಅದೇ ರೀತಿ ಇಂಡಿಯಾದಲ್ಲಿ ಅಂಬೇಡ್ಕರ್ ಸಂವಿಧಾನ ಜೀವಂತ ವಾಗಿರಬೇಕಾದರೆ ಎಲ್ಲರೂ ಒಗ್ಗೂಡಬೇಕಾಗಿದೆ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್  ವಲಯ ಅಧ್ಯಕ್ಷ ಸಲೀಮ್ ಮೌಲವಿ ಖಾಸಿಮಿ ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬಾರಕುಲ್ಲಾ ಬೆಂಗಳೂರು, ಖಿದ್ಮ ಫೌಂಡೇಶನ್ ನ ಅಧ್ಯಕ್ಷ ಯಾಸಿನ್ ಶಿರೂರು, ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ  ಇರ್ಷಾದ್ ಮಾಣಿ ಮತ್ತು ಸಮಾಜ ಸೇವಕರಾದ  ಮುಸ್ತಾಕ್ ಕಾಸಿಮಿ ಮತ್ತು  ಅಬ್ದುಲ್ ಖದರ್ ದಿರಾರವರು  ಉಪಸ್ಥಿತರಿದ್ದರು.

 ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್  ಪುತ್ತೂರು ಸ್ವಾಗತಿಸಿದರೆ, ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ನವೀದ್ ಕುಂದಾಪುರ  ವಂದಿಸಿದರು ಹಾಗೂ ಶರೀಫ್ ಕಬಕ ಮತ್ತು ನವೀದ್ ಕುಂದಾಪುರ  ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಸಕ್ತ ಸನ್ನಿವೇಶದ ಮೇಲೆ ಬೆಳಕು ಚೆಲ್ಲುವ  “ ಬಯಲಾದ ಸತ್ಯ” ಎಂಬ ಕಿರು ಹಾಸ್ಯ ಪ್ರಹಸನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.

ಪುರುಷರು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಜೇತರಿಗೆ ಆಕರ್ಷಕ   ಬಹುಮಾನವನ್ನು  ನೀಡಿ ಸನ್ಮಾನಿಸಲಾಯಿತು. ಏರ್ ಇಂಡಿಯಾ ವತಿಯಿಂದ ನಡೆದ ಅದೃಷ್ಠದ ಲಕ್ಕಿ ಕೂಪನ್ ಡ್ರಾನಲ್ಲಿ ನಿಝರ್  ಉಚಿತವಾಗಿ ಭಾರತಕ್ಕೆ ಹೋಗಿ ಬರುವ ವಿಮಾನದ ಟಿಕೇಟನ್ನು ಗೆದ್ದುಕೊಂಡರು.

ವಾಲಿಬಾಲ್  ಫೈನಲ್ ನಲ್ಲಿ KKR ತಂಡ ಸ್ನೇಹ ಕೂಟ -2017ರ  ಟ್ರೋಫಿಯನ್ನು ತನ್ನಾಗಿಸಿ ಕೊಂಡಾಗಿತ್ತು , ಹಗ್ಗ ಜಗ್ಗಾಟದಲ್ಲಿ ಬಂಟ್ವಾಳ ಗೈಸ್ ತಂಡವು ವಿಜಯಿಯಾಗಿ, ಬತಾ ಗೈಸ್  ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಇಸ್ಮಾಯಿಲ್ ಇನೋಳಿ, ತಾಜುದ್ದೀನ್ ಪುತ್ತೂರು, ಅಬ್ದುಲ್ ರವೂಫ್ ಕಲಾಯಿ ಮತ್ತು ನವೀದ್ ಕುಂದಾಪುರ  ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ IFF EXPO-2017 ಸಾಕ್ಷ್ಯಚಿತ್ರ ಪ್ರದರ್ಶನವು ಇಂಡಿಯಾ ಫ್ರೆಟರ್ನಿಟಿ ಫೋರಮ್ನ ಸಮಾಜ ಸೇವೆಗೆ ಕನ್ನಡಿಯಾಗಿತ್ತು. ಕಾರ್ಯಕ್ರಮಕ್ಕೆ  ಸುಲ್ತಾನ್ ಬಿಲ್ಡರ್ಸ್ ಮಂಗಳೂರು, AKA ಇಂಡಸ್ಟ್ರಿಯಲ್ ಸರ್ವಿಸ್, ದೇಬ ಅಲ ಖಲೀಜ್, ಆನ್ ಡಾಟ್ ಫ್ರೈಟ್, ಫ್ರೆಂಡಿ ಮೊಬೈಲ್ ಮತ್ತು ಫವಾರಿ ಮನಿ ಟ್ರಾನ್ಸ್ಫರ್  ಕಾರ್ಯಕ್ರಮದ ಪ್ರಯಾಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News