×
Ad

ಮಂಡ್ಯ: ಕೆರೆಗೆ ಬಿದ್ದು ರೈತ ಮೃತ್ಯು

Update: 2017-11-08 19:41 IST

ಮಂಡ್ಯ, ನ.8: ರೈತನೋರ್ವ ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದಿದೆ. 

ಕೋಡಿದೊಡ್ಡಿಯ ಚಿಕ್ಕಲಿಂಗಯ್ಯ(50) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಚಿಕ್ಕಲಿಂಗಯ್ಯ ಮಂಗಳವಾರ ತಡರಾತ್ರಿ ಜಮೀನಿಗೆ ನೀರು ಕಟ್ಟಲು ತೆರಳಿದ್ದು, ವಾಪಸ್ ಮನೆಗೆ ಹಿಂತಿರುವಾಗ ಕೆರಗೋಡು ಕೆರೆಗೆ ಆಯತಪ್ಪಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ ಕೆರೆಯಲ್ಲಿ ಚಿಕ್ಕಲಿಂಗಯ್ಯ ಅವರ ಶವ ಪತ್ತೆಯಾಗಿದ್ದು, ಈ ಸಂಬಂಧ ಕೆರಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News