ಧೋನಿ ಪರ ರವಿ ಶಾಸ್ತ್ರಿ ಬ್ಯಾಟಿಂಗ್

Update: 2017-11-10 06:16 GMT

ಹೊಸದಿಲ್ಲಿ, ನ.10: ಭಾರತ ತಂಡ ಕಿವೀಸ್ ವಿರುದ್ಧ ಜಯ ಸಾಧಿಸಿದ ಬಳಿಕ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಹಾಗೂ ಆಕಾಶ್ ಚೋಪ್ರಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಧೋನಿಯ ಜಾಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

  ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಮಾಜಿ ನಾಯಕ ಧೋನಿಯ ಬೆಂಬಲಕ್ಕೆ ನಿಂತಿದ್ದು, ‘‘ಧೋನಿಯ ಓರ್ವ ನಿಜವಾದ ಟೀಮ್ ಮ್ಯಾನ್. ನಮ್ಮ ಸುತ್ತಲೂ ಹಲವಾರು ಅಸೂಯೆಯ ವ್ಯಕ್ತಿಗಳಿದ್ದಾರೆ. ಮತ್ಸರದ ವ್ಯಕ್ತಿಗಳು ಧೋನಿಯ ಅಂತಾರಾಷ್ಟ್ರೀಯ ವೃತ್ತಿಬದುಕು ಕೊನೆಗೊಳ್ಳುವುದನ್ನು ನೋಡಲು ಬಯಸುತ್ತಿದ್ದಾರೆ. ಶ್ರೇಷ್ಠ ಆಟಗಾರ ತನ್ನ ಭವಿಷ್ಯವನ್ನು ಆತನೇ ನಿರ್ಧರಿಸುತ್ತಾನೆ’’ ಎಂದರು.

ಧೋನಿಯ ಸಾಮರ್ಥ್ಯವೇನೆಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಚೆನ್ನಾಗಿ ಗೊತ್ತಿದೆ. ಐಕಾನ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವಿರುದ್ಧದ ಟೀಕೆ ಯಾವುದೇ ವ್ಯತ್ಯಾಸ ಉಂಟು ಮಾಡದು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News