'ನೂರುಲ್ ಹುದಾ ಮೆಹ್ಫಿಲ್-ಇ-ನೂರ್' ಕಾರ್ಯಕ್ರಮದ ಸಮಾಲೋಚನೆ ಸಭೆ -ಆಮಂತ್ರಣ ಬಿಡುಗಡೆ

Update: 2017-11-14 07:28 GMT

ಅಬುಧಾಬಿ, ನ.14: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಯುಎಇ ಸಮಿತಿಯ ಮೊದಲನೆ ವಾರ್ಷಿಕೋತ್ಸವದ ಪ್ರಯುಕ್ತ ಅಬುಧಾಬಿಯಲ್ಲಿ 2018ರ ಮಾರ್ಚ್ 9ಕ್ಕೆ ಮೆಹ್ಫಿಲ್-ಇ-ನೂರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಸಮಾಲೋಚನೆ ಸಭೆ ಮತ್ತು ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ದಿನಾಂಕ ಇತ್ತೀಚೆಗೆ ಇಲ್ಲಿನ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಸಂಯೋಜನಾ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಪಿ.ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷ ಶರೀಫ್ ಕಾವು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೂರುಲ್ ಹುದಾ ಯುಎಇ ಸಮಿತಿ ಕಳೆದ ಒಂದು ವರ್ಷದಿಂದ ಉತ್ತಮ ಕಾರ್ಯ ನಿರ್ವಹಣೆಯ ಮೂಲಕ ಗುರುತಿಸಿಕೊಂಡಿದೆ. ಈ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ಒಂದನೇ ವಾರ್ಷಿಕೋತ್ಸವದ ಯಶಸ್ಸಿಗೆ ಅಬುಧಾಬಿಯ ಎಲಾ ಅನಿವಾಸಿ ಸಮುದಾಯ ಪ್ರೇಮಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು.

ಅಬುಧಾಬಿ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಕಾವು ಸ್ವಾಗತಿಸಿದರು. ಫವಾಝ್ ಫೈಝಿ ಮಜ್ಲಿಸುನ್ನೂರಿಗೆ ನೇತೃತ್ವ ನೀಡಿದರು

ನೂರುಲ್ ಹುದಾ ಅಬುಧಾಬಿ ಸಮಿತಿಯ ಗೌರವಾಧ್ಯಕ್ಷ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷ ಹನೀಫ್ ಅರಿಮೂಲೆ ಮಾತನಾಡಿದರು. ಕಾರ್ಯಕ್ರಮದ ರೂಪು ರೇಶೆಗಳನ್ನು ಪ್ರಧಾನ ಕಾರ್ಯದರ್ಶಿ ಅನ್ವರ್ ಮಣಿಲ ವಿವರಿಸಿದರು.

ಮೆಹ್ ಫಿಲ್-ಇ-ನೂರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುನವ್ವರಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಉಲಮಾ, ಉಮರಾ ನೇತಾರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಚಾರ, ಹಣಕಾಸು ಮತ್ತು ನಿರ್ವಹಣೆಗಾಗಿ ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು   ಸಭೆಯಲ್ಲಿ ಮೆಹ್ ಫಿಲ್-ಇ-ನೂರ್-2018 ಕಾರ್ಯಕ್ರಮದ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು.

ಉಸ್ತುವಾರಿ ಸಮಿತಿಯ ವಿವರ:

ಗೌರವ ಸಲಹೆಗಾರರು: ಅಸ್ಗರ್ ಅಲಿ ತಂಙಳ್ ಕೋಲ್ಪೆ, ಅಬ್ದುಲ್ ಖಾದರ್ ಹಾಜಿ ಅಂಚಿನಡ್ಕ, ಮೊಯ್ದಿನ್ ಕುಟ್ಟಿ ಹಾಜಿ ದಿಬ್ಬ, ಅಲ್ತಾಫ್ ಫರಂಗಿಪೇಟೆ, ಇಬ್ರಾಹೀಂ ಪುಂದೂರ್, ಹನೀಫ್ ಅರಿಮೂಲೆ.

ಅಧ್ಯಕ್ಷ : ಅಬ್ದುಲ್ ರಹಿಮಾನ್ ಅಝ್ಹರಿ ತಂಙಳ್
ಕಾರ್ಯಾಧ್ಯಕ್ಷ: ಅಶ್ರಫ್ ಪಿ.ಕೆ.
ಉಪಾಧ್ಯಕ್ಷ: ರಝಾಕ್ ಹಾಜಿ ಮಣಿಲ, ಅಶ್ರಫ್ ಆರ್ತಿಗೆರೆ, ಸುಲೈಮಾನ್ ಮೌಲವಿ ಕಲ್ಲೆಗ, ಇಸ್ಮಾಯಿಲ್ ತಿಂಗಳಾಡಿ, ಖಾದರ್ ಹಾಜಿ ಸಂಪ್ಯ.

ಪ್ರಧಾನ ಕಾರ್ಯದರ್ಶಿ : ಅನ್ವರ್ ಮಣಿಲ
ಕಾರ್ಯದರ್ಶಿ: ಅಶ್ರಫ್ ಪರ್ಲಡ್ಕ, ಉಸ್ಮಾನ್ ಬೆಳ್ಳಿಪ್ಪಾಡಿ, ಲತೀಫ್ ದೇಲಂಪಾಡಿ, ಮುಹಮ್ಮದ್ ಅಲಿ ಮಾಡನ್ನೂರು, ಶಬೀರ್ ಪಡುಬಿದ್ರೆ.

ಪ್ರಧಾನ ಕೋಶಾಧಿಕಾರಿ: ಅಶ್ರಫ್ ಗಾಳಿಮುಖ, ಕೋಶಾಧಿಕಾರಿ: ಬಶೀರ್ ಎಂ.ಕೆ.

ಹಣಕಾಸು ಮತ್ತು ಅತಿಥಿಗಳ ಉಸ್ತುವಾರಿ: ಅಶ್ರಫ್ ಯಾಕೂತ್ ನೆಕ್ಕರೆ, ಅಶ್ರಫ್ ಶಾ ಮಾಂತೂರು, ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಮ್ ಕಣ್ಣಿಪ್ಪಾಡಿ, ಎ.ಬಿ.ಮೊಯ್ದಿನ್ ಬೆಳ್ಳಾರೆ, ಅಬ್ದುಲ್ ಸಲಾಮ್ ಬಪ್ಪಳಿಗೆ, ಶರೀಫ್ ಕಾವು, ಬದ್ರುದ್ದೀನ್ ಹೆಂತಾರ್, ಸಂಶುದ್ದೀನ್ ಸೂರಲ್ಪಾಡಿ, ಅಶ್ರಫ್ ದೇಲಂಪಾಡಿ, ಅಬ್ದುಲ್ ಲತೀಫ್ ಕೌಡಿಚ್ಚಾರ್, ಯೂಸುಫ್ ಈಶ್ವರಮಂಗಲ, ಸಂಶುದ್ದೀನ್ ಪಳ್ಳತ್ತೂರು, ಅಶ್ರಫ್ ನಾದಲ್ ಶಿಬಾ. 

ಸಂಚಾಲಕರು: ಮುಹಮ್ಮದ್ ರಫೀಕ್ ಆತೂರು, ನವಾಝ್ ಬಿ.ಸಿ.ರೋಡ್, ಹೈದರಲಿ ಕೆ.ಎಚ್., ಉಸ್ಮಾನ್ ಕೆಮ್ಮಿಂಜೆ, ಮಜೀದ್ ಹರಿಯಮೂಲೆ, ಅನ್ಸಾರ್ ಹುದವಿ, ಅಶ್ರಫ್ ಸಿಟಿ ಡ್ರೀಮ್ಸ್, ಆದಂ ಮುಕ್ರಂಪಾಡಿ, ಅನ್ಸಾಫ್ ಪಾತೂರು, ಶಮೀರ್ ಕಲ್ಲಾರೆ, ನೌಶಾದ್ ಕೆ.ಕೆ., ಜಬ್ಬಾರ್ ಬೈತಡ್ಕ, ಉಸ್ಮಾನ್ ಮರಿಲ್, ರಿಫಾಯಿ ಅರಂತೋಡು, ತಾಜು ಕೊಚ್ಚಿ, ಆಸಿಫ್ ಮಾಡನ್ನೂರು, ರಹಿಮಾನ್ ಪೆರಾಜೆ, ಶರೀಫ್ ಇಬ್ರಾಹೀಂ ಕಾವು, ಹುಸೈನ್ ರೆಂಜಲಾಡಿ.

ಮಾಧ್ಯಮ ಮತ್ತು ಪ್ರಚಾರ: ಆಸಿಫ್ ಮರಿಲ್, ಅಬ್ದುಲ್ ಅಝೀಝ್ ಸೋಂಪಾಡಿ, ಸಿದ್ದೀಕ್ ಕೆ.ಎಚ್., ಜಾಬಿರ್ ಬೆಟ್ಪಂಪಾಡಿ, ಅಬ್ದುಲ್ಲಾ ಕೊಚ್ಚಿ.

ವಲಯ ಸಭೆ ಮತ್ತು ಪ್ರಚಾರ: 

ದುಬೈ: ಅಬ್ಬಾಸ್ ಕೇಕುಡೆ, ಉಮರ್ ಮಾಣಿ, ನೂರ್ ಮುಹಮ್ಮದ್ ನೀರ್ಕಜೆ, ಇಲ್ಯಾಸ್ ಕಡಬ, ರಫೀಕ್ ಸಂಪ್ಯ, ನಾಸಿರ್ ಬಪ್ಪಲಿಗೆ, ಮೂಸ ಕುಂಞಿ ಕಾವು, ಶಾಫಿ ಅಜ್ಜಾವರ, ಹಾರಿಸ್ ಪಾಪೆತಡ್ಕ, ಸಿನಾನ್ ಪೆರ್ಲಂಪಾಡಿ, ಖಾದರ್ ಹುದವಿ, ಅಬೂಬಕರ್ ಮುಂಡೋಳೆ, ಅಬ್ದುಲ್ಲಾ ಕಡಬ, ಶರೀಫ್ ಕೊಡಿನೀರ್, ಶಂಸುದ್ದೀನ್ ಇಂದುಮೂಲೆ, ಹನೀಫ್ ಕಟ್ಟತ್ತಾರ್, ಅಬ್ದುಲ್ ಬಾರಿ, ಹಂಝ ಹಾಜಿ, ಶಾಜಹಾನ್ ಕೆ.ಕೆ., ನೌಶಾದ್ ಕೆ., ಇಮ್ರಾನ್ ಮಜಿಲೋಡಿ, ಇಫ್ತಿಕಾರ್ ಕಣ್ಣೂರು, ಶಾಹುಲ್ ಬಿ.ಸಿ.ರೋಡ್, ಮುಹಮ್ಮದ್ ಪಳ್ಳತ್ತೂರು.

ಅಬುಧಾಬಿ: ಅಬ್ದುಲ್ಲಾ ಅಡ್ಕ, ಯಹ್ಯಾ ಕೊಡ್ಲಿಪೇಟೆ, ಹನೀಫ್ ಬುಶ್ರಾ, ಕೆ.ಎಚ್.ಅಲಿ, ಮುಹಮ್ಮದ್ ಅಲಿ, ಶಂಸುದ್ದೀನ್ ಪಳ್ಳತ್ತೂರು, ಮೊಹಿಯುದ್ದೀನ್ ಎಂ.ಕೆ., ಶಿಹಾಬ್ ಮುಕ್ವೆ.

ಅಲ್ ಐನ್: ರಹಿಮಾನ್ ಮಾಡನ್ನೂರು.

ಶಾರ್ಜಾ: ರಝಾಕ್ ಕಾವು, ಎಂ.ಪಿ.ಕೆ.ಪಳ್ಳಂಗೋಡ್, ನಝೀರ್ ಪರ್ಲಡ್ಕ, ನದೀಮ್ ಕೆ.ಕೆ., ಝಿಯಾದ್ ಸಿ.ಕೆ. ಮಾಡನ್ನೂರು.

ಅಜ್ಮಾನ್: ಇಂಜಿನಿಯರ್ ಅಝೀಝ್ ಸುಳ್ಯ, ಬಾತಿಷ ಪರ್ಲಡ್ಕ.

ನೂರುಲ್ ಹುದಾ ಯು.ಎ.ಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್, ಎಸ್.ಕೆ.ಎಸ್.ಎಸ್.ಎಫ್. ಕಾಸರಗೋಡು ಅಬುಧಾಬಿ ಮತ್ತು ಕಣ್ಣೀಯತ್ ಅಕಾಡಮಿ ಕಾಸರಗೋಡು ಅಬುಧಾಬಿ ಸಮಿತಿಯ ಅಧ್ಯಕ್ಷ ಶರೀಫ್ ಪಲ್ಲತಡ್ಕ, ಕೊಕ್ಕಚಾಲ್ ವಾಫಿ ಕಾಲೇಜು ಅಬುಧಾಬಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಮೀಮ್ ಬೇಕಲ್, ಕೆ.ಎಂ.ಸಿ.ಸಿ. ಅಬುಧಾಬಿ ಸಮಿತಿಯ ಉಪಾಧ್ಯಕ್ಷ ಸುಲೈಮಾನ್ ಕಾನಕ್ಕೋಡ್, ಎಂ.ಐ.ಸಿ. ಅಬುಧಾಬಿ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಬೆಳ್ಳಿಪ್ಪಾಡಿ, ಎಸ್.ಕೆ.ಎಸ್.ಎಸ್.ಎಫ್. ಕಾಸರಗೋಡು ಅಬುಧಾಬಿ ಸಮಿತಿಯ ಕಾರ್ಯದರ್ಶಿ ಶಿಹಾಬ್ ತಲಂಗರ, ಕಾರ್ಯಕ್ರಮದ ಕೊ-ಚೇರ್ಮೇನ್ ರಝಾಕ್ ಹಾಜಿ ಮಣಿಲ, ಅಶ್ರಫ್ ಆರ್ತಿಗೆರೆ, ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ, ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ, ಶಾರ್ಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಝಾಕ್ ಕಾವು ,ಅಬ್ದುಲ್ ರಹೀಮಾನ್ ಮುಸ್ಲಿಯಾರ್ ಬಾಯಾರ್ ಮೊದಲಾದವರು ಸಂಧೋರ್ಬಿತವಾಗಿ ಮಾತನಾಡಿದರು.

ಸಭೆಯಲ್ಲಿ ನೂರುಲ್ ಹುದಾ ಅಬುಧಾಬಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಅಲಿ, ಕಾರ್ಯದರ್ಶಿ  ಅಬ್ದುಲ್ ರಹಿಮಾನ್ ಮಾಡನ್ನೂರು ,ಶಂಸುದ್ದೀನ್ ಪಳ್ಳತ್ತೂರು ,ಇರ್ಶಾದ್ ಪಳ್ಳತ್ತೂರು, ತೋಡಾರು ಶಂಸುಲ್ ಉಲಮಾ ಅಕಾಡಮಿ ಅಬುದಾಭಿ ಸಮಿತಿಯ ಪ್ರ.ಕಾರ್ಯದರ್ಶಿ ಯಹ್ಯಾ ಕೋಡ್ಲಿಪೇಟೆ, ಬಶೀರ್ ಅರಿಮೂಲೆ ಸಹಿತ ನೂರುಲ್ ಹುದಾ ಅಬುಧಾಬಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೆಹ್ಫಿಲ್-ಇ-ನೂರ್-2018 ಕಾರ್ಯಕ್ರಮದ ಅಧ್ಯಕ್ಷ ಅಶ್ರಫ್ ಪಿ.ಕೆ. ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News