3 ದಿನದ ಹೆಣ್ಣುಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಸೈನಿಕ
Update: 2017-11-18 12:47 GMT
ಜೈಪುರ, ನ.18: ತನ್ನ ಮೂರು ದಿನದ ಹೆಣ್ಣುಮಗುವನ್ನು ಸೇನಾ ಜವಾನನೊಬ್ಬ ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಸಂಭವಿಸಿದೆ.
ಆರೋಪಿ ಅಶೋಕ್ ಜಾಟ್ ತನ್ನ ಹಸುಳೆಯನ್ನು ಗಸ್ಲಾ ಅಗುನಾ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ನೀರಿನಲ್ಲಿ ಮುಳುಗಿಸಿ ಕೊಂದ ನಂತರ ದೇಹವನ್ನು ಹೂತಿರುವುದಾಗಿ ಆತನ ಪತ್ನಿ ಆರೋಪಿಸಿದ್ದಾಳೆ.
ಈ ದಂಪತಿಗೆ ಒಂದು ಹೆಣ್ಣುಮಗುವಿದ್ದು ಮಂಗಳವಾರ ಅಶೋಕ್ನ ಪತ್ನಿ ಪ್ರಿಯಾಂಕ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಘಟನೆಯ ಬಗ್ಗೆ ಆರೋಪಿಯ ಪತ್ನಿ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೂಳಲ್ಪಟ್ಟ ಹಸುಳೆಯ ಮೃತದೇಹವನ್ನು ಹೊರಗೆ ತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.