ಇಂದು ದುಬೈಯಲ್ಲಿ ಕೊಡಗು ಪ್ರೀಮಿಯರ್ ಲೀಗ್ ಕ್ರಿಕೆಟ್

Update: 2017-11-23 10:36 GMT

ದುಬೈ, ನ.23: ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಯು.ಎ.ಇ. ರಾಷ್ಟ್ರೀಯ ದಿನದ ಅಂಗವಾಗಿ 'ನಮ್ಮ ಮಣ್ಣು ನಮ್ಮ ಹೆಮ್ಮೆ' ಎಂಬ ಶೀರ್ಷಿಕೆಯೊಂದಿಗೆ ಮೊದಲನೇ ವರ್ಷದ ಹೊನಲು ಬೆಳಕಿನ 'ದುಬೈ ಕೆ.ಪಿ.ಎಲ್. ಕ್ರಿಕೆಟ್' ಪಂದ್ಯಾವಳಿ ಇಂದು (ನ.23)  ರಾತ್ರಿ ದುಬೈಯ ಶೇಕ್ ಝಾಯೆದ್ ರಸ್ತೆಯಲ್ಲಿರುವ ಆಲ್ಕೂಸಿನ ಡಲ್ಸ್ಕೊ ಸ್ಪೋಟ್ಸ್  ಅರೆನಾ ಮೈದಾನದಲ್ಲಿ ನಡೆಯಲಿದೆ.

ರಾತ್ರಿ11:30 ಪಂದ್ಯಾವಳಿ ಆರಂಭಗೊಳ್ಳಲಿದೆ. ಮುಂಬೈ ಉದ್ಯಮಿ ಮೊಯ್ದು ಅಕ್ಲ ತಂಡ ಮಾಲಕತ್ವದ, ರಫೀಕಲಿ ಕುಂಜಿಲ ನಾಯಕರಾದ ಎನ್.ಸಿ.ಟಿ. ಎಂಟರ್ಪ್ರೈಸಸ್ ಟ್ರಾವೆಲ್ಸ್ (ಬಾಂಬೆ-ಬೆಂಗಳೂರು-ವಿರಾಜಪೇಟೆ), ಜಮಾಲ್ ಕೊಂಡಂಗೇರಿ ನಾಯಕರಾದ ಅಬ್ದುಲ್ಲಾ ಕೊಂಡಂಗೇರಿ ಮಾಲಕತ್ವದ  ರಾಫೆಲ್ಸ್ ಇಂಟರ್ ನ್ಯಾಶನಲ್ ಪಿಯು ಕಾಲೇಜು, ಹೊದವಾಡ, ನಾಪೋಕ್ಲು, ನೂರುದ್ದೀನ್ ವಿರಾಜಪೇಟೆ ನಾಯಕರಾದ ಹುಸೈನ್ ಸೋಮರಪೇಟೆ ಮಾಲಿಕತ್ವದ ಕೆ.ಎಸ್.ಎ.ಪಿ.ಆರ್.ಒ. ಸರ್ವಿಸಸ್, ದುಬೈ ತಂಡ, ಝಿಯಾ ನಾಯಕತ್ವದ ಮಶೂದ್ ಹಾಕತ್ತೂರು ಮಾಲಕತ್ವದ ಮೈ ನೀಡ್ ಫೈಂಡರ್ ತಂಡ, ಖಲೀಲ್ ನಾಯಕರಾದ ಚಾಮೆ ಹಮೀದ್ ಮಾಲಕರಾದ ಅಯಾನ್ ಸ್ಟ್ರೈಕರ್ಸ್ ದುಬೈ ತಂಡ ಹಾಗೂ ಅಝರ್ ಮಡಿಕೇರಿ ನಾಯಕರಾದ ವಾಹಿದ್ ಮಡಿಕೇರಿ ಮಾಲಕತ್ವದ ಎಂಪರರ್ ಗೇಮಿಂಗ್ ದುಬೈ ತಂಡಗಳು ಪ್ರತಿಷ್ಠ ದುಬೈ ಕೆ.ಪಿ.ಎಲ್ ರೋಲಿಂಗ್ ಟ್ರೋಫಿಗಾಗಿ ಸೆಣಸಾಡಲಿವೆ.

 ಕಾರ್ಯಕ್ರಮದಲ್ಲಿ ವೀರೇಂದ್ರ ಬಾಬು (ಅಧ್ಯಕ್ಷರು ಕನ್ನಡಿಗರು ದುಬೈ ಸಂಘ),  ನಸೀರ್ ಕಾರಾಜೆ (ಕರ್ನಾಟಕ NRI ಫೋರಮ್), ಗಣೇಶ್ ರೈ ಕುಶಾಲನಗರ (ಕರ್ನಾಟಕ NRI ಫೋರಮ್ ಕೊಡಗು ಪ್ರತಿನಿಧಿ), ಶಕೀಲ್ ಹಸನ್(ಹಿಂದೂ  ಮುಸ್ಲಿಂ ಕ್ರಿಶ್ಚಿಯನ್ ಸ್ಥಾಪಕಾಧ್ಯಕ್ಷರು), ಉಸ್ಮಾನ್ ಹಾಜಿ  ನಾಪೋಕ್ಲು (ಕೆ.ಸಿ.ಎಫ್ - ಯುಎಇ), ನೋಯೆಲ್ ದಾಲ್ಮೀದ (ಶಾರ್ಜಾ ಕರ್ನಾಟಕ ಸಂಘ), ಹರೀಶ್ ಕೋಡಿ(ಅಧ್ಯಕ್ಷರು ಕೊಡಗು ಗೌಡ ಸಂಘ - ಯುಎಇ), ಮನೋಜ್ (ಯುಎಇ ಕನ್ನಡಿಗರ ಬಳಗ), ಶಂಸುದ್ದೀನ್ ಪರವಂಡ (ಚೆರಿಯಪರಂಬು ಯುಎಇ ಕಮಿಟಿ), ಹನೀಫ್ ಅಕ್ಲತ್ರ ಗುಂಡಿಕೆರೆ (ಮ್ಯಾನೇಜರ್ ವಾದಿ ಗೋಲ್ಡ್), ಥೌಸಿಫ್ ಕ್ರಾಸ್ ರೋಡ್ ಮಡಿಕೇರಿ, ಲೋಕೇಶ್ ಬೆಳ್ಳಿಯಪ್ಪ(ಟೀಮ್ ಹಾಕಿ ಕೂರ್ಗ್ ಯುಎಇ), ಹಂಝ ಎಮ್ಮೆಮಾಡು (ಕೆಸಿಎಫ್ - ದುಬೈ),  ಪ್ರವೀಣ್ ಶೆಟ್ಟಿ (ಅಬುಧಾಬಿ ಕರ್ನಾಟಕ ಸಂಘ), ಹಮೀದ್ ವಿರಾಜಪೇಟೆ (ಕೊಡಗು ಹಳೆ ವಿದ್ಯಾರ್ಥಿಗಳ ಸಂಘ - ಯುಎಇ), ಅಶ್ರಫ್ ಪರ್ಲಡ್ಕ (ಕೆಸಿಸಿ),  ಶರೀಫ್ ಕಾವು (ಅಧ್ಯಕ್ಷರು ನೂರುಲ್ ಹುದಾ ಮಾಡನ್ನೂರು, ಯುಎಇ), ಅಲ್ತಾಫ್ ಚೋಕಂಡಳ್ಳಿ, ಹುಸೈನ್ ಫೈಝಿ (ಶಂಸುಲ್ ಉಲೆಮಾ ಹೆಣ್ಣು ಮಕ್ಕಳ ಅನಾಥಾಲಯ - ವಿರಾಜಪೇಟೆ), ಮಲ್ಲಿಕಾರ್ಜುನ ಗೌಡ (ಮಾಜಿ ಅಧ್ಯಕ್ಷರು - ಕನ್ನಡಿಗರು ದುಬೈ ಸಂಘ), ಶಶಿಧರ್ ನಾಗರಾಜಪ್ಪ(ದುಬೈ ಕನ್ನಡ ಪಾಠಶಾಲೆ), ತೇಜಬೀರ್ ಸಿಂಗ್ (ಮಾಲಕರು - ಯು ಫಸ್ಟ್ ಬುಸಿನೆಸ್), ಮುಹಮ್ಮದ್  ಒವೈಸ್ ಬಿನ್ ಅಬ್ದುಲ್ಲಾ ತಾನಿ (ಜುಮೇರಾ ಪೊಲೀಸ್ ಅಧಿಕಾರಿ) ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News