ಒಮನ್: ಕೆ.ಸಿ.ಎಫ್.ನಿಂದ ಪ್ರತಿಭೋತ್ಸವ - 2017

Update: 2017-12-06 06:49 GMT

ಒಮನ್, ಡಿ.6: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ಮೆಹ್ಫಿಲೇ ಮುಸ್ತಫಾ(ಸ.) ಮೀಲಾದ್ ಸಮಾವೇಶದ ಪ್ರಚಾರಾರ್ಥ ಜಿ.ಸಿ‌.ಸಿ.ಯಲ್ಲಿ ಪ್ರಥಮ ಬಾರಿಗೆ ಸಂಘಟಿಸಿದ "ಪ್ರತಿಭೋತ್ಸವ-2017" ಕಾರ್ಯಕ್ರಮವು ಒಮನಿನಾದ್ಯಂತ ಯಶಸ್ವಿಯಾಗಿ ನೆರೆವೇರಿತು.

ನವೆಂಬರ್ 1ರಂದು ಶಾಖಾ ಮೂಲಕ ಆರಂಭಗೊಂಡ ಪ್ರತಿಭೋತ್ಸವವು ಸೆಕ್ಟರ್ ನಿಂದ ಝೋನ್, ಝೋನ್ ನಿಂದ ಪ್ರಥಮ ಸ್ಥಾನ ಪಡೆದ ಸ್ಪರ್ಧಾರ್ಥಿಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಪರಿಗಣಿಸಲಾಯಿತು. ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಡಿಸೆಂಬರ್ 1ರಂದು ರುವಿಯ ಅಲ್‌ ಮಾಸ ಹಾಲ್ ನಲ್ಲಿ ನಡೆಯಿತು. ಆರು ಝೋನ್ ಗಳನ್ನು ಒಳಗೊಂಡ ಜಿದ್ದಾ ಜಿದ್ದಿನ ಹೋರಾಟದಲ್ಲಿ ಪ್ರಥಮ ಸ್ಥಾನವನ್ನು ಮಸ್ಕತ್ ಝೋನ್ ಹಾಗೂ ದ್ವಿತೀಯ ಸ್ಥಾನವನ್ನು ಸೊಹಾರ್ ಝೋನ್ ಪಡೆದುಕೊಂಡರೆ ತೃತೀಯ ಸ್ಥಾನವನ್ನು ಸೀಬ್ ಝೋನ್ ಪಡೆದುಕೊಂಡಿತು. ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ ದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಸೊಹಾರ್ ಝೋನ್ ನ ಸಾದಿಖ್ ಕಾಟಿಪ್ಪಳ ಮೂಡಿ ಬಂದರು.

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್. ಒಮನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸೈಯದ್ ಆಬಿದ್ ಅಲ್ ಹೈದ್ರೋಸಿ, ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ, ಝುಬೈರ್ ಸಅದಿ, ಉಬೈದ್ ಸಖಾಫಿ, ಹಂಝ ಕನ್ನಂಗಾರ್, ಖಾಸಿಂ ಹಾಜಿ ನಿಝ್ವ ಉಪಸ್ಥಿತರಿದ್ದರು. ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಇಕ್ಬಾಲ್ ಮದನಿ ಚೆನ್ನಾರ್ , ಕನ್ವೀನರ್ ಕಲಂದರ್ ಬಾವ ಪರಪ್ಪು ಸಂಯೋಜಕರಾಗಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News