ಮಾಜಿ ಸಚಿವ ಕಮಲ್‌ನಾಥ್ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಪೊಲೀಸ್ ಪೇದೆ

Update: 2017-12-16 03:51 GMT

ಚಿಂದ್ವಾರಾ, ಡಿ.16: ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಕಮಲ್‌ನಾಥ್ ಮೇಲೆ ಪೊಲೀಸ್ ಪೇದೆಯೊಬ್ಬ ಗುಂಡುಹಾರಿಸಲು ಯತ್ನಿಸಿದ ಘಟನೆ ನಡೆದಿದೆ.

ಇಲ್ಲಿನ ಮಿನಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಮಲ್‌ನಾಥ್ ಅವರ ಅಂಗರಕ್ಷಕರು ಈ ಯತ್ನವನ್ನು ವಿಫಲಗೊಳಿಸಿದರು. ಕಮಲ್‌ನಥ್ ಅವರು ದಿಲ್ಲಿಗೆ ತೆರಳಲು ಚಿಂದ್ವಾರಾದಲ್ಲಿ ವಿಶೇಷ ವಿಮಾನವನ್ನು ಏರಲು ಹೊರಟಿದ್ದಾಗ ಪೊಲೀಸ್ ಪೇದೆ ಇವರತ್ತ ಬಂದೂಕು ಗುರಿ ಇರಿಸಿದ್ದನ್ನು ಅಂಗರಕ್ಷಕರು ಗಮನಿಸಿ, ಯತ್ನ ವಿಫಲಗೊಳಿಸಿದರು ಎಂದು ಹೆಚ್ಚುವರಿ ಎಸ್ಪಿ ನೀರಜ್ ಸೋನಿ ಪ್ರಕಟಿಸಿದ್ದಾರೆ.

ರತ್ನೇಶ್ ಪವಾರ್ ಎಂಬ ಪೇದೆ ಕಮಲ್‌ನಾಥ್ ಅವರತ್ತ ತಮ್ಮ ಸೇವಾ ರೈಫಲ್‌ನಿಂದ ದಾಳಿ ನಡೆಸಲು ಮುಂದಾಗಿದ್ದರು. ಒಂಬತ್ತು ಬಾರಿ ಚಿಂದ್ವಾರಾದಿಂದ ಆಯ್ಕೆಯಾದ ಕಮಲ್‌ನಾಥ್ ಅವರ ಭದ್ರತಾ ಸಿಬ್ಬಂದಿ ಆತನಿಂದ ಬಂದೂಕು ಕಸಿದುಕೊಂಡರು. ಆ ವೇಳೆಗೆ ಕಮಲ್‌ನಾಥ್ ವಿಮಾನ ಏರಿದರು.

ಪವಾರ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News