ಹಾಫಿಝ್ ಮುನವ್ವರ್ ಹುಸೇನ್

Update: 2017-12-23 18:54 GMT

ಮಂಗಳೂರು, ಡಿ. 23: ಕುದ್ರೋಳಿ ರಹ್ಮತ್ ನಗರದ ನಿವಾಸಿ ಎಚ್.ಕೆ.ಅಬ್ದುಲ್ಲಾ (ಪರಾರಿ ಬಾವಾಕ) ಅವರ ಪುತ್ರ ಹಾಗೂ ಕುದ್ರೋಳಿಯ ಬ್ರೈಟ್ ಸ್ಕೂಲ್‌ನ ಅಧ್ಯಾಪಕ ಹಾಫಿಝ್ ಮುನವ್ವರ್ ಹುಸೇನ್ (39) ಇಂದು ಮಧ್ಯಾಹ್ನ ನಿಧನರಾದರು.

ಮೃತರು ತಂದೆ, ತಾಯಿ, ಪತ್ನಿ ಹಾಗೂ ಮೂವರು ಪುಟ್ಟ ಗಂಡು ಮಕ್ಕಳನ್ನು ಅಗಲಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಸೌಖ್ಯದ ಹಿನ್ನೆಲೆಯಲ್ಲಿ ಮುನವ್ವರ್ ಹುಸೇನ್ ಅವರನ್ನು ಶನಿವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು.

ಮೃತರು ಅಧ್ಯಾಪಕ ವೃತ್ತಿಯೊಂದಿಗೆ ಸಂಜೆ ಹೊತ್ತು ಮದ್ರಸದ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು.

ರವಿವಾರ ಅಂತ್ಯಕ್ರಿಯೆ: ಮೃತರ ಅಂತ್ಯ ಕ್ರಿಯೆಯು ರವಿವಾರ ಬೆಳಗ್ಗೆ 9:30ಕ್ಕೆ ನಡುಪಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ