ರಾಜ್ಯದ ರೈತರಿಗೂ ಈ ಸೌಲಭ್ಯ ಸಿಗಲಿ

Update: 2018-01-02 18:38 GMT

ಮಾನ್ಯರೇ,

ಕಳೆದ ಐದಾರು ವರ್ಷಗಳಿಂದಲೂ ರಾಜ್ಯದಲ್ಲಿ ರೈತರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಮತ್ತು ರಾಜ್ಯ ಸರಕಾರ ಒಂದಿಷ್ಟು ಸಾಲ ಮನ್ನಾ ಮಾಡಿರುವುದರಿಂದ ರೈತರು ಸ್ವಲ್ಪಮಟ್ಟಿಗೆ ಉಸಿರುಬಿಡುವಂತಾಗಿದೆ. ಆದರೆ ರೈತರ ಮುಖದಲ್ಲಿನ ಆತಂಕ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ.

ಮೊನ್ನೆಯಷ್ಟೇ ತೆಲಂಗಾಣ ರಾಜ್ಯ, ರೈತರ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೈತರ ಕೃಷಿಗೆ ಉಪಯೋಗವಾಗುವಂತೆ ದಿನದ ಇಪ್ಪತ್ತನಾಲ್ಕು ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದೆ. ಇಂತಹ ಯೋಜನೆಗಳು ರೈತರ ಬದುಕಿಗೆ ಆಶಾಕಿರಣವಾಗಿವೆೆ. ನಮ್ಮ ರಾಜ್ಯದಲ್ಲೂ ರೈತರ ಕೃಷಿಗೆ ಅನುಕೂಲವಾಗುವಂತಹ ಯೋಜನೆಗಳು ಜಾರಿಗೆ ಬಂದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

Writer - ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News