ಅನಿಲಭಾಗ್ಯ ಮೇಳ ಯಶಸ್ವಿಯಾಗಲಿ

Update: 2018-01-04 18:38 GMT

ಮಾನ್ಯರೇ,

ಕರ್ನಾಟಕ ಸರಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನಿಲಭಾಗ್ಯ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಒಲೆ, ಅವಘಡ ರಕ್ಷಕ (ಅನಿಲ ಸೋರಿಕೆ) ಎರಡು ಸಿಲಿಂಡರ್ ಸೌಲಭ್ಯವನ್ನು ನೀಡಿ ಪ್ರತಿಯೊಂದು ಕುಟುಂಬವನ್ನು ಸಬಲೀಕರಣಗೊಳಿಸಲು ಪರಿಸರ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿರುವುದು ಸ್ವಾಗಾತಾರ್ಹ
ರಾಜ್ಯದ ಎಲ್ಲಾ ಬಡ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಲು, ಪ್ರತಿಯೊಂದು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಪ್ರತಿಯೊಂದು ವಾರ್ಡ್‌ಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅನಿಲಭಾಗ್ಯ ಮೇಳವನ್ನು ನಡೆಸಲು ಅಗತ್ಯ ಹಾಗೂ ಅವಶ್ಯಕ ಕ್ರಮಗಳನ್ನು ಕೈಗೊಂಡು ಸ್ಥಳದಲ್ಲಿಯೇ ಎಲ್ಲ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಿ.

Writer - ಚಂದ್ರಶೇಖರ, ಬೆಂಗಳೂರು

contributor

Editor - ಚಂದ್ರಶೇಖರ, ಬೆಂಗಳೂರು

contributor

Similar News