ಹಳೆ ದ್ವೇಷದ ಹಿನ್ನೆಲೆ: ಯುವಕನ ಕೊಲೆ

Update: 2018-01-18 18:41 GMT

ಬೆಂಗಳೂರು,ಜ.18: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ತಲ್ಲಘಟ್ಟಪುರದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯಪುರ ಮೂಲದ ಸಂಜೀವ್(19) ಕೊಲೆಯಾದ ದುರ್ದೈವಿ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಾರ್ತಿಕ್ ಸೇರಿ ಇಬ್ಬರು ಕೊಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಸಂಜೀವ್ ಅಂಜನಾಪುರದ ಬಿಡಿಎ ಬಡಾವಣೆಯಲ್ಲಿ ಹಾಲೋಬ್ಲಾಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲದಿನಗಳ ಹಿಂದೆ ಸ್ನೇಹಿತ ಕಾರ್ತಿಕ್ ಜೊತೆ ಜಗಳ ಮಾಡಿಕೊಂಡಿದ್ದ. ರಾತ್ರಿ 7.30ರ ಸುಮಾರಿಗೆ ಸಂಜೀವ್‌ನನ್ನು ಪುಸಲಾಯಿಸಿ ಕರೆದೊಯ್ದು, ಮದ್ಯಪಾನ ಮಾಡಿಸಿ, ಸಂಜೀವ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಕಾರ್ತಿಕ್‌ಗಾಗಿ ಶೋಧ ನಡೆಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News