ತೀರ್ಪಿನಿಂದ ಅಸಮಾಧಾನ: ಕೋರ್ಟ್ ಆವರಣದಲ್ಲೇ ಆತ್ಮಹತ್ಯೆಗೆ ಯತ್ನ

Update: 2018-01-23 16:37 GMT

ಬೆಂಗಳೂರು, ಜ.23: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ರಾಜಾಜಿನಗರದ ಪ್ರಕಾಶ್‌ನಗರದ ನಿವಾಸಿಯಾದ ಪದ್ಮನಾಭ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನಾರಾಯಣ್‌ರಾವ್ ಎಂಬವರಿಂದ 60 ಸಾವಿರ ರೂ. ಸಾಲ ಪಡೆದಿದ್ದೆ. ಆದರೆ ನಾರಾಯಣ್ ತನಗೆ 4 ಲಕ್ಷ ಹಣ ಕೊಟ್ಟಿದ್ದೇನೆ ಎಂದು ಕೋರ್ಟ್ ಮೋರೆ ಹೋಗಿದ್ದ. ಕೊನೆಗೆ ಕೋರ್ಟ್ ಸಹ 4.5 ಲಕ್ಷ ಹಣವನ್ನು ಕೊಡುವಂತೆ ಸೋಮವಾರ ತೀರ್ಪು ನೀಡಿತ್ತು. ಹೀಗಾಗಿ ಕೋರ್ಟ್ ತೀರ್ಪಿನಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪದ್ಮನಾಭ್ ಹೇಳಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News