ನದಿಗೆ ಬಿದ್ದ ಬಸ್: 13 ಮಂದಿ ಮೃತ್ಯು

Update: 2018-01-27 04:52 GMT

ಮುಂಬೈ, ಜ.27: ಬಸ್ಸೊಂದು ಪಂಚಗಂಗಾ ನದಿಗೆ ಬಿದ್ದ ಪರಿಣಾಮ 13 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಭವಿಸಿದೆ.

ತಡರಾತ್ರಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  ಶಿವಾಜಿ ಸೇತುವೆಯ ಮೇಲೆ ಬಸ್ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕೆಳಕ್ಕೆ ಉರುಳಿದೆ ಎನ್ನಲಾಗಿದೆ.

ಈ ಸಂದರ್ಭ ಪಾದಚಾರಿಗಳು ತಕ್ಷಣ ಪೊಲೀಸರಿಗೆ ಹಾಗು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲೊಬ್ಬರು ನಂತರ ಮೃತಪಟ್ಟರು. ಮಗುವೊಂದರ ಮೃತದೇಹ ಪತ್ತೆಯಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News