ನಾಯಿಮರಿ ಹತ್ಯೆಗೈದ 7 ಮಂದಿ ವಿರುದ್ಧ ಪ್ರಕರಣ ದಾಖಲು

Update: 2018-02-02 15:47 GMT
ಸಾಂದರ್ಭಿಕ ಚಿತ್ರ

ಥಾಣೆ, ಫೆ. 2: ಥಾಣೆಯಲ್ಲಿ ಚಿತ್ರಹಿಂಸೆ ನೀಡಿ ನಾಯಿ ಮರಿ ಸಾವಿಗೆ ಕಾರಣರಾಗಿದ್ದ ಏಳು ಮಂದಿಯ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕಾಂಪ್ಲೆಕ್ಸ್‌ನ ಸಮೀಪ ನಾಯಿಗಳಿಗೆ ಆಹಾರ ತಿನ್ನಿಸುತ್ತಿದ್ದಾಗ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಕಾಂಪ್ಲೆಕ್ಸ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 14ರಂದು ರಾತ್ರಿ ಸುಮಾರು 8.30ರ ಹೊತ್ತಿಗೆ ಏಳು ಜನರ ಗುಂಪು ನಾಲ್ಕು ನಾಯಿಗಳಿಗೆ ಥಳಿಸಿತು ಹಾಗೂ ಅವುಗಳನ್ನು ಗೋಣಿಚೀಲದಲ್ಲಿ ತುಂಬಿ ಇಲ್ಲಿಗೆ ಸಮೀಪದ ಸ್ಮಶಾನವೊಂದರಲ್ಲಿ ಎಸೆದು ಹೋಯಿತು ಎಂದು ಮಹಿಳೆ ದೂರಿನಲ್ಲಿ ಆಪಾದಿಸಿದ್ದಾರೆ.

ಗೋಣಿಯಲ್ಲಿ ತುಂಬಿ ತ್ಯಜಿಸಲಾಗಿದ್ದ ನಾಯಿಮರಿಗಳನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ನಾಯಿಮರಿ ಮೃತಪಟ್ಟಿತ್ತು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬೀವಂಡಿ ವ್ಯಾಪ್ತಿಯ ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಿಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News