ಕಾಮಗಾರಿಗಳ ವೈಫಲ್ಯ

Update: 2018-02-07 18:51 GMT

ಮಾನ್ಯರೇ,

ನಗರದ ಜ್ಯೋತಿ ಸರ್ಕಲ್‌ನ ರಸ್ತೆಗೆ ಇತ್ತೀಚೆಗಷ್ಟೇ ಇಂಟರ್‌ಲಾಕ್‌ಗಳನ್ನು ಅಳವಡಿಸಲಾಗಿದ್ದು ಇದೀಗ ಕಿತ್ತೆಸೆಯಲಾಗಿದೆ.
ರಸ್ತೆ ಅಥವಾ ಚರಂಡಿಗಳನ್ನು ಯಾವುದೇ ಸ್ಪಷ್ಟವಾದ ಯೋಜನೆಯಿಲ್ಲದೆ ನಿರ್ವಹಿಸುವುದ ರಿಂದಾಗಿಯೇ ಇಂತಹ ಕಾಮಗಾರಿಗಳು ವೈಫಲ್ಯ ಕಾಣುತ್ತದೆ. ಈ ರೀತಿಯ ಕಾಮಗಾರಿಗಳಿಂದ ಗುತ್ತಿಗೆ ದಾರರಿಗೆ ಲಾಭವಲ್ಲದೆ ಮತ್ಯಾವ ಉಪಯೋಗವೂ ಇಲ್ಲ. ಇಂತಹ ಕಾಮಗಾರಿಗಳಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಯಾರು ಹೊಣೆ.?
ಪದೇ ಪದೇ ಸಾರ್ವಜನಿಕ ಸಂಚಾರಕ್ಕೆ ತೊಡಕ ನ್ನುಂಟು ಮಾಡುವ ಇಂತಹ ಕಾಮಗಾರಿಗಳನ್ನು ಇನ್ನಾದರೂ ಸರಿಯಾದ ಯೋಚನೆ ಮಾಡಿ ನಿರ್ವಹಿಸುವರೇ?
 

Writer - -ಸೋಮನಾಥ್ ಎನ್., ಮಂಗಳೂರು

contributor

Editor - -ಸೋಮನಾಥ್ ಎನ್., ಮಂಗಳೂರು

contributor

Similar News