2 ಜಿ ಹಗರಣ: ಆರೋಪಿಗಳಿಗೆ ಹೈಕೋರ್ಟ್ ನೋಟಿಸ್

Update: 2018-03-21 06:00 GMT

ಹೊಸದಿಲ್ಲಿ,ಮಾ.21: ಕಳೆದ ಡಿಸೆಂಬರ್ ನಲ್ಲಿ 2 ಜಿ ಹಗರಣದಲ್ಲಿ   ಖುಲಾಸೆಗೊಂಡಿದ್ದ ಎಲ್ಲ ಆರೋಪಿಗಳಿಗೆ ದಿಲ್ಲಿ ಹೈ ಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ.  

ಮಾಜಿ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜಾ , ಡಿಎಂಕೆ ಎಂಪಿ ಕನ್ನಿಮೋಳಿ  ಸೇರಿದಂತೆ  19 ಆರೋಪಿಗಳನ್ನು ಕಳೆದ ಡಿ.21ರಂದು ಸಿಬಿಐ ವಿಶೇಷ ನ್ಯಾಯಾಲಯದ ಖುಲಾಸೆಗೊಳಿಸಿತ್ತು.

ಈ  ತೀರ್ಪಿನ ವಿರುದ್ಧ ದಿಲ್ಲಿ ಜಾರಿ ನಿರ್ದೇಶನಾಲಯವು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಪ್ರಕರಣದ ಎಲ್ಲ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಮೇ 25ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದೆ.

 2 ಜಿ ಹಗರಣಕ್ಕೆ ಸಂಬಂಧಿಸಿದ 19 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ದಿಲ್ಲಿ  ಹೈಕೋರ್ಟ್ ನಲ್ಲಿ ಜಾರಿ ನಿರ್ದೇಶನಾಲಯವು ಸೋಮವಾರ ಮೇಲ್ಮನವಿ ಸಲ್ಲಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News