ಕೃಷ್ಣಮೃಗಗಳ ಬೇಟೆ ಪ್ರಕರಣ: ಜೋಧ್ ಪುರ ಜೈಲಿನಲ್ಲಿ ಸಲ್ಮಾನ್ ಖಾನ್
Update: 2018-04-05 12:04 GMT
ಹೊಸದಿಲ್ಲಿ, ಎ.5: ಕೃಷ್ಣಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ನಟ ಸಲ್ಮಾನ್ ಖಾನ್ ಅವರಿಗೆ ಜೋಧ್ ಪುರ ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಇದೇ ಪ್ರಕರಣದಲ್ಲಿ ನಟ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ನೀಲಂ ಹಾಗು ಟಬು ಅವರನ್ನು ಖುಲಾಸೆಗೊಳಿಸಿದೆ.
ಇದೀಗ ಸಲ್ಮಾನ್ ಖಾನ್ ಅವರನ್ನು ಜೋಧ್ ಪುರ ಜೈಲಿಗೆ ಕಳುಹಿಸಲಾಗಿದೆ. ಅತ್ಯಾಚಾರ ಆರೋಪಿ ಅಸಾರಾಮ್ ಬಾಪು, ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬರನ್ನು ಜೀವಂತ ದಹಿಸಿದ ಶಂಭುಲಾಲ್ ರೇಗರ್ ಇದೇ ಜೈಲಿನಲ್ಲಿದ್ದಾರೆ.
ಸಲ್ಮಾನ್ ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆ ನಡೆಯಲಿದೆ. ಸಲ್ಮಾನ್ ಖಾನ್ ಈಗಾಗಲೇ ಜೈಲನ್ನು ಪ್ರವೇಶಿಸಿದ್ದು, ಜೈಲು ಹಾಗು ಸೆಲ್ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.