ಅಬ್ದುಲ್ ಬಾಸಿತ್

Update: 2018-04-05 14:27 GMT

ಮಂಗಳೂರು, ಎ. 5: ಪಾವೂರು ಗ್ರಾಮದ ಮಲಾರ್ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರ ಅಬ್ದುಲ್ ಬಾಸಿತ್ (14) ಗುರುವಾರ ನಿಧನರಾದರು. 

ಪಾವೂರು ಸರಕಾರಿ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಬಾಸಿತ್ ಅಲ್ಪಕಾಲದ ಅಸೌಖ್ಯಕ್ಕೊಳಗಾಗಿ ಐದು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಮೃತ ಬಾಸಿತ್ ತಂದೆ, ತಾಯಿ, ಒಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ