ತಾಯಿಫ್: ಕಾಂಗ್ರೆಸ್ ಎನ್.ಐ.ಆರ್. ಘಟಕದಿಂದ ಚುನಾವಣಾ ಪ್ರಚಾರ

Update: 2018-04-12 05:33 GMT

ಸೌದಿ ಅರೇಬಿಯ, ಎ.12: ಕಾಂಗ್ರೆಸ್ ಎನ್.ಐ.ಆರ್. ತಾಯಿಫ್ ಘಟಕದ ವತಿಯಿಂದ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ವಿಶೇಷ ಸಭೆಯು ಇಲ್ಲಿ ತೆರೆಯಲಾದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆಯಿತು.

ತಾಯಿಫ್ ಘಟಕದ ಅಧ್ಯಕ್ಷ ಇಬ್ರಾಹೀಂ ಕಣ್ಣಂಗಾರ್ ನೇತೃತ್ವ ವಹಿಸಿದ್ದರು. ಸೌದಿ ಅರೇಬಿಯದಲ್ಲಿರುವ ಕರಾವಳಿ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಭಾರತಕ್ಕೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಗೆಲುವಿಗಾಗಿ ಶ್ರಮಿಸಲು ಹಾಗೂ ಕಡ್ಡಾಯ ಮತದಾನ ಮಾಡುವ ನಿಟ್ಟಿನಲ್ಲಿ ಶೀಘ್ರವಾಗಿ ಭಾರತಕ್ಕೆ ತೆರಳಲು ಅನುಕೂಲವಾಗುವಂತೆ ಪಟ್ಟಿಯನ್ನು ಕಾಂಗ್ರೆಸ್ ಮಂಗಳೂರು ಉತ್ತರ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ ಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಸೌದಿ ಅರೇಬಿಯ ದಿಂದ ಕರೆತರುವ ಉಸ್ತುವಾರಿ ವಹಿಸಿರುವ ಹಾರಿಸ್ ಬೈಕಂಪಾಡಿಯವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಸೌದಿ ಸ್ಥಳೀಯಾಡಳಿತ ಅಧಿಕಾರಿ ಖಾಲಿದ್ ಅಲ್ಪಘ್ಹರ್ ಅಲ್ ಜಹ್ರಾನಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News