ಅಹ್ಮದಾಬಾದ್: ಜಿಗ್ನೇಶ್ ಬೆಂಬಲಿಗರು-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2018-04-14 06:59 GMT

ಅಹ್ಮದಾಬಾದ್, ಎ.14: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭ ಶಾಸಕ ಜಿಗ್ನೇಶ್ ಮೆವಾನಿ ಬೆಂಬಲಿಗರು ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಸಂಸದರು ಹಾಗು ಸದಸ್ಯರು ಮಾಲಾರ್ಪಣೆ ಮಾಡುವುದನ್ನು ಜಿಗ್ನೇಶ್ ಮೇವಾನಿ ಕಾರ್ಯಕರ್ತರು ತಡೆದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News